ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಕೊಡಿಯಲ್ಲಿ ಮೀನುಗಾರಿಕೆ ಬಂದರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ, ಮೀನುಗಾರರಿಗೆ ಸಂಕಷ್ಟ ಪರಿಹಾರ, ಮತ್ಸ್ಯಾಶ್ರಯ ಮತ್ತು ಭಾಗ್ಯಲಕ್ಷ್ಮಿ ಯೋಜನೆಯಡಿ ಚೆಕ್ ವಿತರಿಸಿದರು. ಮೀನುಗಾರಿಕೆ ಮತ್ತು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್. ಮೆಂಡನ್ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು. ನಂತರ ಕುಂದಾಪುರದ ಕುಂಬಾಶಿಗೆ ಭೇಟಿ ನೀಡಿದ ಮುಖ್ಯಮಂತ್ರಿ, ಸುದ್ದಿಗಾರರೊಂದಿಗೆ ಮಾತನಾಡಿ,ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಶ್ರಮಿಸುತ್ತಿದೆ. ಹಣಕಾಸಿನ ಇತಿಮಿತಿಯನ್ನು ಗಮನದಲ್ಲಿರಿಸಿ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡಲಾಗುವುದು, ನೂತನವಾಗಿ ಆಯ್ಕೆಯಾದ ಸಚಿವರುಗಳಿಗೆ ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುವುದು ಎಂದರು. ರಾಜ್ಯಾದ್ಯಂತ ಇರುವ ಬಿಲ್ಲವ, ಈಡಿಗ, ನಾಮಾಧಾರಿ ಮತ್ತಿತರ ಉಪ ಪಂಗಡಗಳ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಈ ಬಾರಿಯ ಬಜೆಟ್ ನಲ್ಲಿ 50 ಕೋಟಿ ರೂಪಾಯಿ ಮೀಸಲಿರಿಸಲು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು.
Related Articles
ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಭೇಟಿ ನೀಡದ ಪ್ರಧಾನಿ ಮೋದಿ
May 1, 2018
Samachar Network-CLB
ರಾಜ್ಯ, ರಾಷ್ಟ್ರೀಯ, ರಾಜಕೀಯ, ಪ್ರಧಾನಿ ಮೋದಿ
Comments Off on ಉಡುಪಿಗೆ ಬಂದರೂ ಕೃಷ್ಣಮಠಕ್ಕೆ ಭೇಟಿ ನೀಡದ ಪ್ರಧಾನಿ ಮೋದಿ
Seen By: 94 ಉಡುಪಿ:ಮೇ-1: ಚುನಾವಣಾ ಪ್ರಚಾರ ನಿಮಿತ್ತ ಇಂದು ಉಡುಪಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿಯ ಕೃಷ್ಣ ಮಠಕ್ಕೆ ಭೇಟಿ ನೀಡದೇ ಹಿಂತಿರುಗಿದ್ದಾರೆ. ನೀತಿ [more]
ಇನ್ನು, ಎರಡೂವರೆ ವರ್ಷ ಅಭಿವೃದ್ಧಿಯದ್ದೇ ಮಂತ್ರ : ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ಕೃಷಿ ಬಜೆಟ್ನತ್ತ ಚಿತ್ತ
January 15, 2021
Varta Mitra News - SP
ಬೆಂಗಳೂರು, ರಾಜ್ಯ, ರಾಜಕೀಯ, ಸಿಎಂ ಹೆಚ್ಡಿಕೆ
Comments Off on ಇನ್ನು, ಎರಡೂವರೆ ವರ್ಷ ಅಭಿವೃದ್ಧಿಯದ್ದೇ ಮಂತ್ರ : ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ಕೃಷಿ ಬಜೆಟ್ನತ್ತ ಚಿತ್ತ
Seen By: 45 ಬೆಂಗಳೂರು: ಈ ಬಾರಿ ರೈತಪರ ಹಾಗೂ ಅಭಿವೃದ್ಧಿಪರವಾದ ಆಯ-ವ್ಯಯ ಮಂಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]
ಅಯೋಧ್ಯೆ: ಶ್ರೀರಾಮ ಮಂದಿರ ವಿನ್ಯಾಸ ಬಗ್ಗೆ ತಜ್ಞ ಇಂಜಿನಿಯರ್ಸ್ ಸಮಿತಿ ರಚನೆ
December 16, 2020
Varta Mitra News - SP
ಮತ್ತಷ್ಟು
Comments Off on ಅಯೋಧ್ಯೆ: ಶ್ರೀರಾಮ ಮಂದಿರ ವಿನ್ಯಾಸ ಬಗ್ಗೆ ತಜ್ಞ ಇಂಜಿನಿಯರ್ಸ್ ಸಮಿತಿ ರಚನೆ
Seen By: 82 ಉಡುಪಿ: ಅಯೋಧ್ಯಾದಲ್ಲಿ ಭವ್ಯವಾದ ರಾಮ ಮಂದಿರದ ತಳಪಾಯದ ವಿನ್ಯಾಸವನ್ನು ವಿಮರ್ಶಿಸಿ ಶಿಫಾರಸ್ಸು ಮತ್ತು ವರದಿ ಸಲ್ಲಿಸುವುದಕ್ಕೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ [more]