ರಾಫೆಲ್ ಯುದ್ಧ ವಿಮಾನ ಇದ್ದಿದ್ದರೆ ಅದರ ಪರಿಣಾಮವೇ ಬೇರೆ ಆಗಿರುತ್ತಿತ್ತು:

ಜಾಮ್ ನಗರ: ಪಾಕಿಸ್ತಾನದ ಬಾಲಕೋಟ್ ವೈಮಾನಿಕ ದಾಳಿ ವೇಳೆ ರಾಫೆಲ್ ಯುದ್ಧ ವಿಮಾನ ಇದ್ದಿದ್ದರೆ ಪರಿಣಾಮವೇ ಬೇರೆ ಆಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಾಮ್ ನಗರದಲ್ಲಿ ಮಾತನಾಡಿದ ಪ್ರಧಾನಿ, ಸೂಕ್ತ ಸಮಯಕ್ಕೆ ರಾಫೆಲ್ ಒಪ್ಪಂದ ಪೂರ್ಣಗೊಂಡು, ನಮ್ಮ ಬಳಿ ರಾಫೆಲ್ ಯುದ್ಧ ವಿಮಾನಗಳಿದ್ದರೆ ವೈಮಾನಿಕ ದಾಳಿಯ ಪರಿಣಾಮ ಇನ್ನೂ ವಿಭಿನ್ನವಾಗಿರುತ್ತಿತ್ತು ಎಂದು ನಾನು ಹೇಳಿದ್ದೇನೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಪ್ರತಿಪಕ್ಷಗಳು ನಮ್ಮ ವಾಯುಪಡೆಯ ದಾಳಿಯನ್ನೇ ನಾನು ಪ್ರಶ್ನಿಸುತ್ತಿದ್ದೇನೆ ಎಂದು ಬಿಂಬಿಸುತ್ತಿದ್ದಾರೆ. ಪ್ರತಿಪಕ್ಷಗಳು ಕಾಮನ್​ ಸೆನ್ಸ್​​​ ಉಪಯೋಗಿಸಿ ಟೀಕೆ ಮಾಡಬೇಕು ಅಂದು ನಾನು ಹೇಳಿದ್ದು, ನಾನು ಏನು ಹೇಳಿದ್ದೇನೆಂದರೆ ರಾಫೆಲ್ ಇದ್ದಿದ್ದರೆ ನಮ್ಮ ಯಾವುದೇ ವಿಮಾನವನ್ನು ಹೊಡೆದುರುಳಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅವರು ಯಾರೂ ಜೀವಂತವಾಗಿ ಹೋಗುತ್ತಿರಲಿಲ್ಲ ಎಂಬುದಾಗಿ ಎಂದು ತಿಳಿಸಿದ್ದಾರೆ.

ಇದೇ ವೇಳೆ ಫೆಬ್ರವರಿ 26ರ ವೈಮಾನಿಕ ದಾಳಿಯ ಸಾಕ್ಷ್ಯ ಕೇಳುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ ಪ್ರಧಾನಿ, ಭಯೋತ್ಪಾದನೆ ಅಂತ್ಯಗೊಳಿಸುವುದು ನಮ್ಮ ಉದ್ದೇಶ. ಆದರೆ ಕಾಂಗ್ರೆಸ್‌ ಸೇನಾ ಕಾರ್ಯಾಚರಣೆಯನ್ನು ಅನುಮಾನಿಸುತ್ತಿದೆ. ಅಲ್ಲದೆ ಸೇನೆ ನೀಡಿದ ಮಾಹಿತಿಯ ಬಗ್ಗೆ ಶಂಕಿಸುತ್ತಿದೆ. ಇಡೀ ದೇಶವೇ ಉಗ್ರರ ಮೇಲೆ ನಡೆದ ದಾಳಿಗೆ ಬೆಂಬಲ ಸೂಚಿಸಿದೆ. ಯೋಧರ ಬಲಿದಾನಕ್ಕೆ ಸೂಕ್ತ ಉತ್ತರ ನೀಡಿರುವುದಾಗಿ ಜನ ನಂಬಿದ್ದಾರೆ ಎಂದರು.

ಉಗ್ರವಾದವನ್ನ ನೋಡಿಕೊಂಡು ಭಾರತ ಸುಮ್ಮನೇ ಕುಳಿತುಕೊಳ್ಳಲು ಆಗಲ್ಲ. ಭಯೋತ್ಪಾದನೆಯನ್ನ ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಪಾಕಿಸ್ತಾನದ ಸುಳ್ಳುಗಳಿಗೂ ಉತ್ತರ ನೀಡಬೇಕಿದೆ ಎಂದು ಹೇಳಿದರು.

PM Narendra Modi,Jamnagar,remove terrorism, from the country

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ