ನಾನೇ ಉಮೇಶ್ ಜಾಧವ್‌ರಿಂದ ರಾಜೀನಾಮೆ ಕೊಡಿಸಿದ್ದು’

ಅಲ್ಲದೇ, ಉಮೇಶ್ ಜಾಧವ್ ಕಲಬುರ್ಗಿ ಲೋಕಸಭಾ ಚುನಾವಣೆಗೆ ನಿಲ್ಲುವುದು ಖಚಿತ, ಜಾಧವ್ ಅವರನ್ನು ಗೆಲ್ಲುಸುವುದು ನನ್ನ ಗುರಿ, ಖರ್ಗೆ ಅವರನ್ನು ಸೋಲಿಸುವುದು ಹಠವಾಗಿದೆ. ಜಾಧವ್ ಅವರು ಯಾವುದೇ ಹಣ ಪಡೆದಿಲ್ಲ, ಸ್ವಯಂ ಪ್ರೇರಿತವಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು.ಜಾಧವ್ ಬಿಜೆಪಿಗೆ ಯಾವಾಗ ಸೇರುತ್ತಾರೆ ಎನ್ನುವುದು ಹೈಕಮಾಂಡ ನಿರ್ಧರಿಸುತ್ತದೆ. ಜಾಧವ್ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಖರ್ಗೆ ನನ್ನನ್ನು ಸೋಲಿಸಿದ್ದಾರೆ ನಾನು ಅವರನ್ನು ಸೋಲಿಸಬೇಕು. ಜಾಧವ್ ಅವರು ಇದೇ 6ರಂದು ಪಕ್ಷಕ್ಕೆ ಸೇರುತ್ತಾರ ಅಥವಾ ನಂತರ ಸೇರುತ್ತಾರೋ ಅದು ಹೈಕಮಾಂಡಗೆ ಬಿಟ್ಟ ವಿಚಾರ ಎಂದು ಚಿಂಚನ್ಸೂರ್ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ