![Supreme](http://kannada.vartamitra.com/wp-content/uploads/2018/07/Supreme-678x368.jpg)
ನವದೆಹಲಿ:ಜು-3: ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಹಲ್ಲೆಯ ಪ್ರಕರಣಗಳನ್ನು ತಡೆಯುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಲ್ಲೆಗಳ ಬಗ್ಗೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಹಲ್ಲೆಯ ಸಂತ್ರಸ್ತರನ್ನು ನಿರ್ದಿಷ್ಟ ಧರ್ಮ, ಜಾತಿಗೆ ತಳುಕುಹಾಕುವುದೂ ಸಹ ತಪ್ಪು ಎಂದು ಎಚ್ಚರಿಸಿದ್ದಾರೆ. ಸಂತ್ರಸ್ತ ಸಂತ್ರನಷ್ಟೇ, ಆತನನ್ನು ಯಾವುದೇ ಧರ್ಮ, ಜಾತಿಯ ಆಧಾರದಲ್ಲಿ ಗುರುತಿಸುವುದು ಸರಿಯಲ್ಲ ಎಂದಿದ್ದಾರೆ.
ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಕರ್ತವ್ಯ ಎಂದು ಹೇಳಿರುವ ನ್ಯಾಯಾಲಯ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದೆ.
Cow Vigilantism, Supreme Court, Victims