ಶ್ರೀಸೋಮನಾಥ್ ಟ್ರಸ್ಟ್ನ ಮುಂದಿನ ಅಧ್ಯಕ್ಷರಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಟ್ರಸ್ಟ್ ಗುಜರಾತ್ ನ ಗಿರ್-ಸೋಮನಾಥ್ ಜಿಲ್ಲೆಯ ಪ್ರಭಾಸ್ ಪಠಾಣ್ ನಗರದಲ್ಲಿರುವ ವಿಶ್ವ ಪ್ರಸಿದ್ಧ ಸೋಮನಾಥ ದೇವಾಲಯದ ನಿರ್ವಹಣೆ ಹೊತ್ತಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಭಾಗವಹಿಸಿದ್ದ ಶ್ರೀ ಸೋಮನಾಥ ಟ್ರಸ್ಟ್ನ ವರ್ಚುವಲ್ ಸಭೆಯಲ್ಲಿ ಉನ್ನತ ಸ್ಥಾನಕ್ಕೆ ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಿಧನ ಹೊಂದಿದ ಗುಜರಾತ್ ಮಾಜಿ ಮುಖ್ಯಮಂತಿ ಹಾಗೂ ಟ್ರಸ್ಟ್ ನ ಮಾಜಿ ಅಧ್ಯಕ್ಷ ಕೇಶುಭಾಯಿ ಪಟೇಲ್ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೋಮನಾಥ ಟ್ರಸ್ಟ್ನ ಕಾರ್ಯವನ್ನು ಪ್ರಶಂಸಿಸಿದ ಪ್ರಧಾನಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ನಮ್ಮ ಪರಂಪರೆಯೊಂದಿಗೆ ಪ್ರವಾಸಿಗರ ಸಂಪರ್ಕವನ್ನು ಗಟ್ಟಿಗೊಳಿಸಲು ಟ್ರಸ್ಟ್ವತಿಯಿಂದ ಇನ್ನೂ ಮುಂದೆಯೂ ಹೆಚ್ಚಿನ ಮೂಲಸೌಕರ್ಯ ಹಾಗೂ ಮನರಂಜನಾ ಸೌಲಭ್ಯ, ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.
Related Articles
ಯೋಧರೊಂದಿಗೆ ಮೋದಿ ದೀಪಾವಳಿ | ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ
November 17, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ
Comments Off on ಯೋಧರೊಂದಿಗೆ ಮೋದಿ ದೀಪಾವಳಿ | ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ
Seen By: 54 ಲೊಂಗೆವಾಲ(ರಾಜಸ್ಥಾನ): ಭಾರತವನ್ನು ಕೆಣಕಿದರೆ, ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶತ್ರು ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. [more]
ಯೋಧರ ಜತೆ ಮೋದಿ ಇಂದು ದೀಪಾವಳಿ
November 14, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ, ಧರ್ಮ - ಸಂಸ್ಕೃತಿ, ಮನರಂಜನೆ
Comments Off on ಯೋಧರ ಜತೆ ಮೋದಿ ಇಂದು ದೀಪಾವಳಿ
Seen By: 88 ಹೊಸದಿಲ್ಲಿ: ದೇಶದ ಯೋಧರೊಂದಿಗೆ ದೀಪಾವಳಿ ಆಚರಿಸುವ ರೂಢಿಯನ್ನು ಮುಂದುವರಿಸುತ್ತ, ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಗಡಿ ಪ್ರದೇಶಕ್ಕೆ ತೆರಳಿ ಶನಿವಾರ ಸೈನಿಕರೊಂದಿಗೆ [more]
ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು, ಈಗ ಬಿಜೆಪಿ ಅಧಿಕಾರದಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ: ಸಿದ್ದರಾಮಯ್ಯ
August 9, 2021
Varta Mitra News - SP
ರಾಜ್ಯ
Comments Off on ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು, ಈಗ ಬಿಜೆಪಿ ಅಧಿಕಾರದಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ: ಸಿದ್ದರಾಮಯ್ಯ
Seen By: 80 ಬೆಂಗಳೂರು, ಆ.9- ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು. ಈಗ ಬಿಜೆಪಿ ಅಧಿಕಾರವಧಿಯಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ [more]