ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆ, ಬೆಳೆಹಾನಿ ಸೇರಿದಂತೆ ಅನೇಕ ಅನಾಹುತಗಳಿಗೆ ಕಾರಣವಾಗಿದೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಳೆದ ರಾತ್ರಿ ಗುಡುಗು ಮಿಂಚು ಸಹಿತ ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಾನಗಲ್ ತಾಲ್ಲೂಕಿನಲ್ಲಿ ಮಾವು ಬೆಳೆಗೆ ಮಾರಕವಾಗಿದೆ. ದಾವಣಗೆರೆ ಜಿಲ್ಲಾದ್ಯಂತ ಕೂಡ ಅಕಾಲಿಕ ಮಳೆಯಾಗಿದ್ದು, ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಸಿಡಿಲು ಬಡಿದು 10 ಕುರಿಗಳು ಸಾವು ಕಂಡಿವೆ. ದಾವಣಗೆರೆ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ಇದರಿಂದ ಜನರು ಪರದಾಡುವಂತಾಗಿದೆ. ಸಂಜೆಯಿಂದ ಮಧ್ಯರಾತ್ರಿವರೆಗೂ ಧಾರಾಕಾರವಾಗಿ ಸುರಿದ ಮಳೆಯಿಂದ ಭತ್ತದ ನಾಟಿ ಮಡಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ನೂರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಜೋಳ, ಕಡಲೆ, ಶೇಂಗಾ ಬೆಳೆಗೆ ಹಾನಿ ಸಂಭವಿಸಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಸಮೀಕ್ಷೆಯ ನಂತರ ನಷ್ಟದ ಅಂದಾಜು ತಿಳಿಯಲಿದೆ.
Related Articles
ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: 27 ಜನ ಬಲಿ
May 3, 2018
Samachar Network-CLB
ರಾಷ್ಟ್ರೀಯ, ಕ್ರೈಮ್
Comments Off on ರಾಜಸ್ಥಾನದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: 27 ಜನ ಬಲಿ
Seen By: 64 ಜೈಪುರ:ಮೇ-3: ರಾಜಸ್ಥಾನದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಗೆ 27 ಜನ ಬಲಿಯಾಗಿದ್ದು 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ ರಾಜಸ್ಥಾನದ [more]
ನಿವಾರ್ ಚಂಡಮಾರುತ: ರಾಜ್ಯದಲ್ಲೂ ಮಳೆ ಸಾಧ್ಯತೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗೆ ಯೆಲ್ಲೋ ಅಲರ್ಟ್
November 26, 2020
Varta Mitra News - SP
ಬೆಂಗಳೂರು, ರಾಜ್ಯ
Comments Off on ನಿವಾರ್ ಚಂಡಮಾರುತ: ರಾಜ್ಯದಲ್ಲೂ ಮಳೆ ಸಾಧ್ಯತೆ ಬೆಂಗಳೂರು ಸೇರಿ ವಿವಿಧ ಜಿಲ್ಲೆಗೆ ಯೆಲ್ಲೋ ಅಲರ್ಟ್
Seen By: 46 ಬೆಂಗಳೂರು: ತಮಿಳುನಾಡಿನಲ್ಲಿ ನಿವಾರ್ ಚಂಡ ಮಾರುತ ಪರಿಣಾಮ ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗಲಿದೆ. [more]
* 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ
October 23, 2020
Varta Mitra News - SP
ಬೆಂಗಳೂರು, ರಾಜ್ಯ, ಆರೋಗ್ಯ, ಮತ್ತಷ್ಟು
Comments Off on * 136 ಗ್ರಾಮಗಳ 43,158 ಜನರ ಸ್ಥಳಾಂತರ * ಪ್ರವಾಹಕ್ಕೆ ಸಿಲುಕಿದ್ದ 5,016 ಜನರ ರಕ್ಷಣೆ * 233 ಕಾಳಜಿ ಕೇಂದ್ರದಲ್ಲಿ 38,676 ಜನರಿಗೆ ಆಶ್ರಯ * ಹಾನಿಗೊಳಗಾದ 13,533 ಮನೆಗಳಿಗೆ ಮೊದಲ ಕಂತಿನ ಪರಿಹಾರ 35.48 ಕೋಟಿ ರೂ. ಬಿಡುಗಡೆ * 16,075 ಕುಟುಂಬಗಳ ಪೈಕಿ 12,113 ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ತಲಾ 10 ಸಾವಿರ ರೂ. ಪಾವತಿ * 2020ರ ಮುಂಗಾರು ಅವಯಲ್ಲಿ 25 ಜಿಲ್ಲೆಗಳಲ್ಲಿ 173 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ * ರಾಜ್ಯದಲ್ಲಿ ವಾಡಿಕೆಗಿಂತ ಶೇ.245 ರಷ್ಟು ಹೆಚ್ಚು ಮಳೆ, ಉ.ಒಳನಾಡಿನಲ್ಲಿ ಶೇ.331 ರಷ್ಟು ಹೆಚ್ಚು, ಕರಾವಳಿಯಲ್ಲಿ ಶೇ.435 ರಷ್ಟು ಹೆಚ್ಚು ಮಳೆ
Seen By: 53 ಬೆಂಗಳೂರು: ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ಪ್ರಸ್ತಾವನೆಗಳೊಂದಿಗೆ ನೆರವು ಕೇಳಲು ರಾಜ್ಯ ಸರ್ಕಾರ [more]