ಪೊಲೀಸರಿಂದ ದಾವೂದ್ ಸಂಬಂಧಿಯ ಬಂಧನ

ಮುಂಬೈ, ಜು.18- ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಅಪರಾಧ ಹಿನ್ನೆಲೆ ಇರುವ ಹತ್ತಿರದ ಸಂಬಂಧಿಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದೆ.

ಹಫ್ತಾ ವಸೂಲಿ ಸೇರಿದಂತೆ ಹಲವು ಸುಲಿಗೆ ಪ್ರಕರಣಗಳಲ್ಲಿ ಶಾಮೀಲಾಗಿದ್ದ ರಿಜ್ವಾನ್ ಕಸ್ಕರ್‍ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಈತ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್‍ನ ಪುತ್ರ.

ದೇಶದಿಂದ ಫಲಾಯನವಾಗಲು ಈಗ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ವಿಶೇಷ ಪೊಲೀಸ್ ಸಿಬ್ಬಂದಿ ನಿನ್ನೆ ರಾತ್ರಿ ರಿಜ್ವಾನ್‍ನನ್ನು ಬಂಧಿಸಿದರು.

ಎರಡು ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ದಾವೂದ್ ಇಬ್ರಾಹಿಂನ ಪರಮಾಪ್ತ ಅಹಮದ್ ರಾಝಾ ವಾಧಾರಿಯಾ ಎಂಬ ಕ್ರಿಮನಲ್‍ನನ್ನು ಹಫ್ತಾ ವಸೂಲಿ ಸಂಬಂಧ ಬಂಧಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ