ನಿಧನ ವಾರ್ತೆ

ದಾಂಡೇಲಿ: ಸ್ಥಳೀಯ ಡಿ.ಎಫ್.ಎ ಕಂಪೆನಿಯ ನಿವೃತ್ತ ಉದ್ಯೋಗಿ ಮನೋಹರ ಚೌಡು ನಾಯ್ಕರು (84) ಮಂಗಳವಾರ ಅನಾರೋಗ್ಯದಿಂದ ದೈವಾದೀನರಾದರು.

ಮೂಲತ: ಕಾರವಾರದ ನಂದನಗದ್ದಾ ಊರಿನವರಾಗಿರುವ ಇವರು ಉದ್ಯೋಗ ನಿಮಿತ್ತ ದಾಂಡೇಲಿಗಾಗಮಿಸಿ ಡಿ.ಎಪ್.ಎ. ಕಂಪನಿಯಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರು ಉತ್ತಮ ಗುಮಟೆಪಾಂಗ್ ವಾದಕರೂ ಹಾಗೂ ಕಲಾವಿದರಾಗಿ ಅಪಾಶರ ಜನಪ್ರಿಯತೆಯನ್ನು ಗಳಿಸಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರು ಮಕ್ಕಳಾದ ಕಾಂಗ್ರೆಸ್ ಮುಖಂಡ ಹಾಗೂ ಇಂಟೆಕ್ ಜಿಲ್ಲಾಧ್ಯಕ್ಷ ದಿವಾಕರ ನಾಯ್ಕ, ದಿನೇಶ ನಾಯ್ಕ ಮತ್ತು ಮೂವರು ಹೆಣ್ಣು ಮಕ್ಕಳು ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕೋಮಾರಪಂತ ಸಮಾಜ ಹಾಗೂ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸೈಯದ ತಂಗಳ ಸಂತಾಪ :

ಮೃತ ಮನೋಹರ ಚೌಡು ನಾಯ್ಕ ನಿಧನಕ್ಕೆ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ ತಂಗಳ ಅವರು ಸಂತಾಪ ವ್ಯಕ್ತಪಡಿಸಿ, ಹಿರಿಯರಾಗಿದ್ದ ಮನೋಹರ ಚೌಡು ನಾಯ್ಕರವರು ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು. ಅವರ ಜೀವನಾದರ್ಶ ಅನುಕರಣೀಯವಾಗಿದೆ. ಅವರ ನಿಧನ ತುಂಬಲಾರದ ನಷ್ಟ ಎಂದು ತಿಳಿಸಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ