ನಾನು ರೈತ ವಿರೋಧಿಯಲ್ಲ- ನಿಜಗುಣಸ್ವಾಮಿಜೀ

ಹುಬ್ಬಳ್ಳಿ- ನಾನು ರೈತರ ಸಾಲ ಮನ್ನಾ ಮಾಡಬೇಡಿ ಅಂತಾ ಎಲ್ಲಿಯೂ ಹೇಳಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿಗಳು ಸ್ಪಷ್ಟನೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಬಾದಾಮಿಯ ಕಾರ್ಯಕ್ರಮವೊಂದರಲ್ಲಿ ಮದ್ಯವ್ಯಸನ ಹಾಗೂ ಜೂಜಾಟದಿಂದ ಸಾಲದ ಸುಳಿಗೆ ಸಿಲುಕುವ ಬಗ್ಗೆ ಮಾತನಾಡಿದ್ದೆ‌‌. ನಾನೂ ರೈತರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಬದಲಾಗಿ ಮಾಧ್ಯಮಗಲ್ಲಿ ರೈತ ವಿರೋಧಿ ಎಂಬಂತೆ ಬಿಂಬೀಸಲಾಗಿದೆ ಎಂದರು. ಸಾಲ ಮಾಡಿದರೆ ಶೂಲಕ್ಕೆ ಸಿಲುಕಿದಂತಾಗುತ್ತದೆ. ಸಾಲ ಮಾಡುವುದು ಬದುಕಿಗೆ ಅಪಾಯಕಾರಿ ಅಂತಾ ಹೇಳಿದ್ದೆ. ಆದರೆ, ನಾನು ಯಾವುದೇ ರೀತಿಯ ರೈತರ ಹೆಸರನ್ನು ಬಳಸಿಲ್ಲ. ನಾನು ರೈತ ವಿರೋಧಿ ಅಲ್ಲ ಎಂದು ತಮ್ಮ ಸ್ಪಷ್ಟನೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ