ನಿಧನ ವಾರ್ತೆ

 

ದಾಂಡೇಲಿ: ನಗರದ ಬಾಂಬೇಚಾಳ ನಿವಾಸಿ ಸ್ಥಳೀಯ ಬಸವ ವಿವಿದೊದ್ದೇಶಗಳ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಹಾಗೂ ಯುವ ಸಮಾಜ ಸೇವಕನಾಗಿದ್ದ ಶ್ರೀನಿವಾಸ ರಾಮಸ್ವಾಮಿ (ವ:37) ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಉತ್ತಮ ಜನಸಂಪರ್ಕವನ್ನು ಹೊಂದಿದ್ದ, ಶ್ರೀನಿವಾಸ ರಾಮಸ್ವಾಮಿಯವರು ಅನೇಕ ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು. ಅಸಂಖ್ಯಾತ ಗೆಳೆಯರ ಮೆಚ್ಚಿನ ಗೆಳೆಯರಾಗಿದ್ದ ಇವರು ತಾಯಿ, ಮಡದಿ, ಮಕ್ಕಳು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಅಸಂಖ್ಯಾತ ಗೆಳೆಯರ, ಬಂಧುಗಳ ಸಮ್ಮುಖದಲ್ಲಿ ಬುಧವಾರ ಜರುಗಿತು. ಮೃತರ ನಿಧನಕ್ಕೆ ಬಸವ ವಿವಿದೊದ್ದೇಶಗಳ ಸಹಕಾರಿ ಸಂಘದ ಪ್ರವರ್ತಕ ಗುರುನಾಥ ದಾನಪ್ಪನವರ, ಬ್ಯಾಂಕಿನ ಮ್ಯಾನೇಜರ್ ಲಿಂಗರಾಜ ಹುದಳಿ, ಬ್ಯಾಂಕ್ ಅಧಿಕಾರಿಗಳಾದ ಅಡವಯ್ಯ ಅಂದಕಾರಿಮಠ, ದೀಪಾ ಸಂಕೇತ ಕುಡಲೆ, ವಿದ್ಯಾ ಪಾಟೀಲ, ಕರಣಾ ಅವರು ಸಂತಾಪ ಸೂಚಿಸಿದ್ದಾರೆ. ಮೃತರ ಗೌರವಾರ್ಥ ಬ್ಯಾಂಕಿಗೆ ಒಂದು ದಿನ ರಜೆ ಘೋಷಿಸಲಾಯಿತು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ