ಕೆರೆಯಲ್ಲಿ ಮುಳುಗಿ ಸತ್ತ ವ್ಯಕ್ತಿಯ ಹೆಣ ನೊಡಿ ಇಡಿ ಊರ ನಿರೆ ಖಾಲಿ

ಧಾರವಾಡ:ಜೂ-22: ಇಲ್ಲಿನ ಕೆರೆಯಲ್ಲಿ ವ್ಯಕ್ತಿ ಮೃತಪಟ್ಟ ಎಂದು ಕೆರೆಯ ನೀರನ್ನೇ ಗ್ರಾಮಸ್ಥರೆಲ್ಲ‌ ಸೇರಿ ಖಾಲಿ ಮಾಡಿರುವ ಘಟನೆ ಧಾರವಾಡಜಿಲ್ಲೆಯಲ್ಲಿ ನಡೆದಿದೆ.

ಜೂನ್ ೧೫ ರಂದು ಧಾರವಾಡ ಜಿಲ್ಲೆಯ ನಾವಳ್ಳಿ ಗ್ರಾಮದ ಕೆರೆಯಲ್ಲಿ ನವಲಗುಂದ ತಾಲೂಕಿನ ಶಲವಡಿ ಗ್ರಾಮದ ಪರಶಶುರಾಮ್ ತಳವಾರ್ ಎಂಬ ವ್ಯಕ್ತಿ ಬಿದ್ದು ಸಾವನ್ನಪ್ಪಿದ್ದ. ಇದನ್ನ ಇಡೀ ಗ್ರಾಮದ ಜನರು ನೋಡಿದ್ದರು. ಇನ್ನು ಬಿದ್ದ ವ್ಯಕ್ತಿಯ ಬಾಯಿ ಹಾಗೂ ಕಿವಿಯಿಂದ ರಕ್ತ ಬಂದು ಕೆರೆಯ ನೀರಿನಲ್ಲಿ ಕೂಡಿಕೊಂಡಿತ್ತು.

ಇದನ್ನೆಲ್ಲ ನೋಡಿದ್ದ ಜನರು ಈ ಕೆರೆಯ ನೀರು ಕುಡಿಯಲು ನಿರಾಕರಿಸಿದರು. ಈ ಹಿನ್ನೆಲೆ ನಾವಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕೆರೆಯ ನೀರನ್ನೇ ಖಾಲಿ ಮಾಡುವ ನಿರ್ಧಾರಕೈಗೊಂಡು, ಸದ್ಯ ೧೩ ನೀರೆತ್ತುವ ಮೋಟರ್‌ಗಳಿಂದ ಕೆರೆಯಿಂದ ನೀರು ತೆಗೆಯಲು ಮುಂದಾಗಿದ್ದಾರೆ. ಕಳೆದ ಮೂರು ದಿನಗಳಿಂದ ಈ ನೀರನ್ನ ತೆಗೆಯಲಾಗುತ್ತಿದ್ದು, ಮಲಪ್ರಭಾ ಬಲದಂಡೆ ಕಾಲುವೆಗೆ ಈ ನೀರನ್ನ ಬಿಡಲಾಗುತ್ತಿದೆ.

ಕಳೆದ ೬ ತಿಂಗಳ ಹಿಂದೆಯಷ್ಟೇ ಇದೇ ಕಾಲುವೆಯಿಂದ ಈ ಕೆರೆಗೆ ನೀರನ್ನ ತುಂಬಿಸಿಕೊಳ್ಳಲಾಗಿತ್ತು. ಇನ್ನು ಇದೇ ಕೆರೆಯ ನೀರು ಈ ಗ್ರಾಮದ ಜನರಿಗೆ ಆಶ್ರಯವಾಗಿತ್ತು. ಸದ್ಯ ನೀರು ಖಾಲಿ ಆದ ಮೇಲೆ ಈ ಗ್ರಾಮದ ಜನರಿಗೆ ಕುಡಿಯುವ ನೀರಿನ ಚಿಂತೆಯಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ರೂ ಜನರು ಇದೇ ಕೆರೆಯ ಮೇಲೆ ಅವಲಂಬಿತರಾಗಿದ್ರು. ಈ ಕೆರೆ ನೀರು ಸಾವನ್ನಪ್ಪಿದ ವ್ಯಕ್ತಿಯಿಂದ ಕಲುಷಿತವಾಗಿದ್ರೂ, ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಜನರ ಆಕ್ರೋಶ ವ್ಯಕ್ತಪಡಿಸ್ತಿದಾರೆ.

ಮೃತ ವ್ಯಕ್ತಿ ದಲಿತ ಸಮುದಾಯಕ್ಕೆ ಸೇರಿದವನಾಗಿದ್ರಿಂದಲೇ ಕೆರೆ ನೀರನ್ನ ಖಾಲಿ ಮಾಡಲಾಗಿದೆ ಅಂತಾ ಕೆಲವರು ಆರೋಪಿಸ್ತಿದಾರೆ. ಜಗತ್ತು ಎಷ್ಟೇ ವೇಗವಾಗಿ ಬದಲಾದ್ರೂ ಜಾತಿ ವ್ಯವಸ್ಥೆ ಮಾತ್ರ ಇನ್ನೂ ಬದಲಾಗ್ತಿಲ್ಲ ಅನ್ನೋದು ಅಷ್ಟೇ ಸತ್ಯ.

Dharwada,navalli,lake

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ