ಬಿಸಲಕೊಪ್ಪ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಹಸಿರು ಸಮಾರಂಭ ಹಾಗೂ ಪ್ಲಾಸ್ಟಿಕ್ ಕುರಿತು ಜಾಗೃತಿ ಜಾತಾ

ಶಿರಸಿ :

ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ, ಗ್ರಾಮಪಂಚಾಯತ ಬಿಸಲಕೊಪ್ಪ ಹಾಗೂ ಸೂರ್ಯನಾರಾಯಣ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ‘ವಿಶ್ವ ಪರಿಸರ ದಿನ’ ಕಾರ್ಯಕ್ರಮ ಸಸಿ ನೆಡುವುದರ ಮೂಲಕ ಸಂಭ್ರಮದಿಂದ ನೆರವೇರಿಸಲ್ಪಟ್ಟಿತು.

ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಲಕ್ಷ್ಮೀನಾರಾಯಣ ಹೆಗಡೆ ಪ್ರಾಧ್ಯಾಪಕರು ತೋಟಗಾರಿಕಾ ಮಹಾವಿದ್ಯಾಲಯ ಶಿರಸಿರವರು ಪರಿಸರ ಕಾಳಜಿಗಾಗಿ ಯುವಶಕ್ತಿಯ ಸದ್ಭಳಕೆಯಾಗಬೇಕು. ಪ್ಲಾಸ್ಟಿಕ್ ರಹಿತ ವ್ಯವಸ್ಥೆಗೆ ಮಕ್ಕಳು ಜಾಗೃತವಾಗಬೇಕು ಎಂದು ತಿಳಿ ಹೇಳಿದರು. ವಿದ್ಯಾರ್ಥಿಗಳು ಕೇವಲ ನೌಕರಿಗಾಗಿ ಆತುರ ಪಡದೇ ಕೃಷಿಯಲ್ಲಿಯೂ ಸಹ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು. ಅರಣ್ಯ ಇಲಾಖೆಯಿಂದ ಆಗಮಿಸಿದ್ದ ಉಪವಲಯ ಅರಣ್ಯಾಧಿಕಾರಿ ಯಶೋಧಾ ನಾಯ್ಕ ಪ್ರತಿದಿನ ಪರಿಸರ ದಿನವಾಗಬೇಕು ಎಂದು ಹೇಳುವುದರ ಮೂಲಕ ಬೀಟ್ ಪ್ಲಾಸ್ಟಿಕ್ ಪೊಲ್ಯೂಷನ್ ಎಂಬುದನ್ನು ಎತ್ತಿ ಹಿಡಿದರು.

ಬಿಸಲಕೊಪ್ಪ ಸೊಸೈಟಿ ಅಧ್ಯಕ್ಷರಾದ ಎಸ್.ಎನ್. ಭಟ್ಟರವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಅರ್ಥೈಸಿದರು. ಕೆ.ಡಿ.ಪಿ.ನಾಮ ನಿರ್ದೇಶಿತ ಸದಸ್ಯರಾದ ಬಿ.ಎಸ್. ಗಂಗಾಧರ ಅವರು ಅರಣ್ಯ ಸಂರಕ್ಷಣೆ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ ಜನರ ಕಾರ್ಯಕ್ರಮವಾಗಲೆಂದು ಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ಎಸ್.ಎಂ.ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು . ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ಹೆಗಡೆ, ಗ್ರಾಮಪಂಚಾಯತ ಉಪಾಧ್ಯಕ್ಷರು, ಸದಸ್ಯರು. ಅರಣ್ಯ ಇಲಾಖೆಯವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಗ್ರಾಮಪಂಚಾಯತ ಸೆಕ್ರೆಟರಿಯವರು ಸರ್ವರನ್ನೂ ವಂದಿಸಿದರು . ವೃಕ್ಷಲಕ್ಷದ ಗಣಪತಿ ಬಿಸಲಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ, ಸಸ್ಯ ಶಾಮಲಾಂ ವಂದೇ ಮಾತರಂ ಎನ್ನುವ ಘೋಷಣೆಯನ್ನು ಹಾಕುತ್ತಾ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಕುರಿತು ಆಕರ್ಷಕವಾಗಿ ಜಾಗೃತಿ ಜಾತಾ ನಡೆಸಿದರ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ