ತೊಟ್ಟಿಲು ತೂಗಲು ಮುಂಡಿಗೆಕೆರೆ ಸಜ್ಜು

ಶಿರಸಿ :

ಶಿರಸಿ ತಾಲೂಕು ಸುಧಾಪುರ ಕ್ಷೇತ್ರದಲ್ಲಿಯ ಪ್ರಮುಖ ಪ್ರವಾಸೀ ತಾಣ ಮುಂಡಿಗೆಕೆರೆ ಪಕ್ಷಿಧಾಮ ಮಳೆಗಾಲ ಬತೆಂದರೆ ಇಲ್ಲಿ ಬೆಳ್ಳಕ್ಕಿಗಳ ಕಲರವವೋ……..ಕಲರವ. ದಿನವಿಡಿ ಇವುಗಳ ಆಗಮನ ನಿರ್ಗಮವನ್ನು ವೀಕ್ಷಣಾ ಗೋಪುರದಿಂದ ನೋಡುವುದೇ ಮಕ್ಕಳಿಗೆ, ಪಕ್ಷಿ ಪ್ರಿಯರಿಗೆ ಒಂದು ಸಂಭ್ರಮ. ಪ್ರತಿ ವರ್ಷ ಮಾನ್ಸೂನ ಆಗಮನದ ಸಂದೇಶ ಹೊತ್ತು ಬೆಳ್ಳಕ್ಕಿಗಳ ಮುಂಡಿಗೆ ಕೆರೆಗೆ ಗುಂಪು ಗುಂಪಾಗಿ ಇಳಿಯುತ್ತದೆ.ಇವು ಕೆರೆಗೆ ಇಳಿದ 5ರಿಂದ6 ದಿನಗಳಲ್ಲಿ ಮಳೆ ಪ್ರಾರಂಭ ಎಂಬುದು ಈ ಭಾಗ್ಯದ ರೈತರ ಅಂಬೊಂಣ.

ನೂರಾರು-ವರ್ಷಗಳಿಂದ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿಯ ಮುಂಡಿಗೆಕೆರೆ ಪಕ್ಷಿಗಳು ಬಂದು ಮಳೆಗಾಲದಲ್ಲಿ ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟಿ-ಮೊಟ್ಟೆ ಇಟ್ಟು-ಮರಿ ಮಾಡಿಕೊಂಡು ಹಾರಿಹೋಗುವ ಪರಿಪಾಠ ನಿಯಮಿತವಾಗಿ ನಡೆದುಕೊಂಡು ಬಂದಿದೆ. 1980 ರಲ್ಲಿ ಕರ್ನಾಟಕದ ಖ್ಯಾತ ಪಕ್ಷಿತಜ್ಞ ದಿ|| ಪಿ.ಡಿ ಸುದರ್ಶನ ಹೋಗಿ ಜಗತ್ತಿಗೆ ಈ ಪಕ್ಷಿ ಸಾಮ್ರಾಜ್ಯದ ಇರುವನ್ನು ತೋರಿ ಕೊಟ್ಟರು ಮತ್ತು ಅಂದಿನಿಂದ ಪಕ್ಷಿಗಳ ಆಗಮನ ನಿಗಮ ದಾಖಲಿಸುತ್ತಾ ಬಂದರು. 1995 ರ ನಂತರ ಜಾಗೃತ ವೇದಿಕೆ ಸೋಂದಾ (ರಿ) ದಾಖಲಾತಿಯನ್ನು ನಿರಂತರವಾಗಿ ಮಾಡುತ್ತ ಬರುತ್ತದೆ. ದಿ|| ಪಿ ಡಿ ಸುದರ್ಶನ ರವರ ಸತತ ಶ್ರಮದ ಫಲವಾಗಿ ಅಂತರಾಷ್ಟ್ರೀಯ ಜಲ-ಚರ ಪಕ್ಷಿಗಳ ಗಣತಿಯಲ್ಲಿ ಮುಂಡಿಗೆಕೆರೆ ಪಕ್ಷಿಧಾಮ ದಾಖಲಾಗಿರುವದು ಶ್ಲಾಘನೀಯ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಳಿವಿನತಿಸಿಲ್ಲಿರುವ ಮುಂಡಿಗೆ ಸಸ್ಯ. ಬೃಹತ ಪ್ರಮಾಣದಲ್ಲಿ ಉಳಿದಿರುವದೆಂದರೆ, ಅದು ಸೋಂದಾದ ಮುಂಡಿಗೆಕೆರೆಯಲ್ಲಿ ಮಾತ್ರ. ಕೆರೆಯ 4-14-00 ಗುಂಟೆ ಕ್ಷೇತ್ರವನ್ನು ಮುಳ್ಳಿನಿಂದ ಕೂಡಿದ ಎಲೆಗಳನ್ನು ಹೊಂದಿದ ಮುಂಡಿಗೆ ಗಿಡ ಸಂಪೂರ್ಣವಾಗಿ ಆಕ್ರಮಿಸಿದೆ. ಪೊದೆ-ಪೊದೆಯಾಗಿ ಬೆಳೆದ ಗಿಡಗಳ ಮೇಲೆ ಬೆಳ್ಳಕ್ಕಿಗಳಿಗೆ ಹಾಗೂ ಇತರ ಪಕ್ಷಿಗಳಿಗೆ ಗೂಡು ಕಟ್ಟಲು ಸುರಕ್ಷಿತ ತಾಣವಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಬೆಳ್ಳಕ್ಕಿಗಳು ತಮ್ಮ ಸಂತಾನಾಭಿವೃಧ್ಧಿಗೆ ಗೂಡು ಕಟ್ಟುವ ಏಕೈಕ ಸ್ಥಳ ಇದಾಗಿದೆ.

ಮಾನ್ಸೂನ್ ಆರಂಭವಾಗುವ ಪೂರ್ವದಲ್ಲಿ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಬಂದು ಕೆರೆಗೆ ಇಳಿದು ಗೂಡು ಕಟ್ಟಲು ಯೋಗ್ಯ ಸ್ಥಳದ ಆಯ್ಕೆ ಮಾಡಿ ಕೊಳ್ಳುತ್ತೇವೆ. ಇದು ಕೆರೆಗೆ ಇಳಿದ 5-6 ದಿನದಲ್ಲಿ ಮಳೆ ನಿಶ್ಚಿತ. ಕಾರಣ ರೈತರು ಬೆಳ್ಳಕ್ಕಿಗಳು ಕೆರೆಗೆ ಇಳಿದ ನಂತರ ಉಳುಮೆ ಕಾರ್ಯಕ್ಕೆ ತೊಡಗುವದು. ಅಂದಿನಿಂದಲೂ ನಡೆದು ಕೊಂಡು ಬಂದಿದೆ. ಮಾನ್ಸೂನ್ ವಿಳಂಬವಾದರೆ ಇವುಗಳು ಕೆರೆಯಲ್ಲಿ ವಸತಿ ಮಾಡುವದಿಲ್ಲಾ. ಮುಂಗಾರು ತರುವ ಬೆಳ್ಳಕ್ಕಿಗಳು ಬಂದಿಲ್ಲಾ ಹಾಗಾಗಿ ಉಳುಮೆ ಮುಂದಿನವಾರ ಪ್ರಾರಂಭಿಸುವಾ ಎಂಬುದು ಸುಧಾಪುರಲ್ಲಿಯ ಕೃಷಿಕರ ಮನೆಮಾತು. ಈ ವರ್ಷ ಚಂಡಮಾರುತ ಪ್ರಭಾವ ಇದ್ದರೂ ಮೇ 21 ರಿಂದಲೇ ಕೆರೆಯ ಮೇಲ್ಗಡೆ ಹಾರಾಟ ನಡೆಸಿ ವಾಪಸ್ಸು ಹೋಗುತ್ತವೆ.

ಸುಮಾರು 20ರಿಂದಾ 25 ಪಕ್ಷಿಗಳು ಹಗಲಿನಲ್ಲಿ ಕೆರೆಗಳಿಗೆ ಇಳಿದು ಸ್ಥಳ ಆಯ್ಕೆ ಮಾಡಿ, ಸಂಜೆ ವಾಪಸ್ಸಾಗುತ್ತಿವೆ. ಇದು ದಿನಾಲು ನಡೆಯುವ ಪ್ರಕ್ರಿಯೆಯಾಗಿದ್ದು ಆದರೆ ದಿನದಿಂದ ದಿನಕ್ಕೆ ಬೆಳ್ಳಕ್ಕಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ, ಮೇ 31 ರಂದು ಸಂಜೆ 7-15 ರ ವರೆಗೂ ಹೊರಗಿನಿಂದ ಬೆಳ್ಳಿಕ್ಕಿಗಳು ಕೆರೆಗೆ ಬಂದು ಕುಳಿತುಕೊಳ್ಳುವದು ನಡೆದಿದೆ. ಆ ವೇಳೆ ಸುಮಾರು 75 ರಿಂದ 80 ಪಕ್ಷಿಗಳು ಕೆರೆಯಲ್ಲಿ ವಸತಿ ಮಾಡಿವೆ. ದಿನದಿಂದ ದಿನಕ್ಕೆ ವಸತಿ ಮಾಡುವ ಬೆಳ್ಳಕ್ಕಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದರೆ ಇನ್ನು 5 ರಿಂದಾ 6 ದಿನಗಳಲ್ಲಿ ಈ ಭಾಗದಲ್ಲಿ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು ನಿಖರವಾಗಿ ಹೇಳಬಹುದು.

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ (ಕೆ,ಎಸ್,ಎನ್,ಡಿ,ಎಚ್,ಸಿ) ಸೋಂದಾ ಗ್ರಾಮ ಪಂಚಾಯತದಲ್ಲಿ ಬಂದು ಟೆಲಿಮೆಟ್ರಿಕ್ ಮಳೆ ಮಾಡಿನ ಯಂತ್ರ ಅಳವಡಿಸಿದ್ದು. ಅದರ ಮಾಹಿತಿಯಂತೆ ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಇಲ್ಲಿಯವರೆಗೆ 229 ಮಿ.ಮಿ ಮಳೆ ಆಗಿದೆ. ಇದು ರೈತರಿಗೆ ಸಂತಸ ತಂದಿದೆ.

ಪಕ್ಷಿ ವೀಕ್ಷಣೆಗೆ ಜೂನ್ 25 ರ ನಂತರ ಅಕ್ಟೋಬರ ಕೊನೆಯವರೆಗೆ ಸಕಾಲ ವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ