ಮರಾಠ ಸಮುದಾಯದವರಿಂದ ಅಭಿನಂದನೆ

ಶಿರಸಿ: ಕ್ಷತ್ರೀಯ ಮರಾಠ ಮಹಾ ಒಕ್ಕೂಟ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಘಟಕದ ವತಿಯಿಂದ ಕುಮಟಾ ಹೊನ್ನಾವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿರುವ ದಿನಕರ ಶೆಟ್ಟಿ , ಅವರಿಗೆ ಜಿಲ್ಲಾಧ್ಯಕ್ಷ ಪಾಂಡುರಂಗ ಪಾಟೀಲ್ ನೇತೃತ್ವದಲ್ಲಿ ಕ್ಷತ್ರೀಯ ಮರಾಠ ಸಮುದಾಯದ ಮುಖಂಡುರುಗಳು ಅವರನ್ನು ಅಭಿನಂದಿಸಿ ಕ್ಷತ್ರೀಯ ಮರಾಠ ಸಮುದಾಯದವರು ಹಾಗೂ ಆ ಸಮುದಾಯದ ಉಪ ಪಂಗಡದವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿಗೆ ಬಿ.ಜೆ.ಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ಹಾಗಾಗಿ, ಕ್ಷತ್ರೀಯ ಮರಾಠ ಸಮುದಾಯವನ್ನು ಹಾಗೂ ಆ ಸಮುದಾಯದ ಉಪ ಪಂಗಡಗಳನ್ನು ಪ್ರಸ್ತುತ 3 ಬಿ ಯಿಂದ 2 ಎ ಸೇರ್ಪಡೆಗೆ ಬೆಂಬಲಿಸಬೇಕೆಂದು ವಿನಂತಿಸಿದಾಗ ತಾನು ಆ ಸಂದರ್ಭ ಬಂದಾಗ ನಮ್ಮ ಜಿಲ್ಲೆಯ ಹಾಗೂ ರಾಜ್ಯದ ಬಿ.ಜೆ.ಪಿ ನಾಯಕರುಗಳೊಂದಿಗೆ ಚಚರ್ಿಸಿ ತಮಗೆ ಸಂಪೂರ್ಣ ಬೆಂಬಲಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮರಾಠ ಸಮುದಾಯದ ರಾಜ್ಯ ಮುಖಂಡ ಹಾವೇರಿಯ ಶ್ರೀನಿವಾಸ ಸಂಕಪಾಳೆ ಸೇರಿದಂತೆ ಆ ಸಮುದಾಯದ ಅನೇಕ ಜಿಲ್ಲೆ , ರಾಜ್ಯ ಮುಖಂಡರುಗಳು ಉಪಸ್ಥಿತರಿದ್ದರೆಂದು ಜಲ್ಲಾಧ್ಯಕ್ಷ ಪಾಂಡುರಂಗ ವಿ. ಪಾಟೀಲ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ