ಅರಣ್ಯ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ ಆರು ನಕ್ಸಲರು ಹತ:

ಭುವನೇಶ್ವರ್, ಮೇ 14- ಒಡಿಶಾದ ಎರಡು ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲಿ ಇಬ್ಬರು ಮಹಿಳೆಯರೂ ಸೇರಿ ಆರು ಮಂದಿ ನಕ್ಸಲರು ಹತರಾಗಿದ್ದಾರೆ. ಕುಂಧಾಮಲ್ ಮತ್ತು ಜಾಲನ್‍ಗಿರ್ ಜಿಲ್ಲೆಯಲ್ಲಿ ನಿನ್ನೆ ಈ ಗುಂಡಿನ ಕಾಳಗಗಳು ನಡೆದಿವೆ.  ಎರಡೂ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಮಾವೋವಾದಿ ಬಂಡುಕೋರರ ವಿರುದ್ಧ ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದವು. ಈ ಸಂದರ್ಭದಲ್ಲಿ ಯೋಧರು ಮತ್ತು ನಕ್ಸಲರ ನಡುವೆ ಎನ್‍ಕೌಂಟರ್ ನಡೆದಿತ್ತು.
ಕಂಧಾಮಲ್ ಜಿಲ್ಲೆಯ ಸುಡುಕುಂಪ ಅರಣ್ಯದಲ್ಲಿ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಮಾವೋವಾದಿಗಳು ಹತರಾದರು. ಮೃತ ನಕ್ಸಲರಿಂದ ಎಕೆ-47 ಸೇರಿದಂತೆ 8 ರೈಫಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಬಾಲನ್‍ಗಿರ್ ಕಾನನದಲ್ಲಿ ನಡೆದ ಮತ್ತೊಂದು ಗುಂಡಿನ ಕಾಳಗದಲ್ಲಿ ಇನ್ನಿಬ್ಬರು ನಕ್ಸಲರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಹತರಾದ ನಕ್ಸಲರ ತಲೆಗೆ ಒಟ್ಟು 9 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ