ಚುನಾವಣೆ ಹತ್ತಿರ ಬಂದಾಗ ರೈತರ ಸಾಲದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಕಳೆದ 70 ವರ್ಷದಲ್ಲಿ ರೈತರ ಬಗ್ಗೆ ಯಾಕೆ ಕಾಳಜಿ ತೋರಿಸಲಿಲ್ಲ..?: ಪ್ರಧಾನಿ ಮೋದಿ ಪ್ರೆಶ್ನೆ

ತುಮಕೂರು:ಮೇ-5: ಚುನಾವಣೆ ಹತ್ತಿರ ಬಂದಾಗ ರೈತರ ಸಾಲದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಕಳೆದ 70 ವರ್ಷದಲ್ಲಿ ರೈತರ ಬಗ್ಗೆ ಯಾಕೆ ಕಾಳಜಿ ತೋರಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.

ತುಮಕೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ರೈತರ ಇಂದಿನ ದುಸ್ಥೀತಿಗೆ ಕಾಂಗ್ರೆಸ್ ನ ದುರಾಡಳಿತ ಕಾರಣ. ಅವರ ಪಾಪದ ಕೆಲವನ್ನ ನಾವು ಅಧಿಕಾರಕ್ಕೆ ಬಂದ ಮೇಲೆ ತೊಳೆಯಬೇಕಾಗಿದೆ ಎಂದು ಗುಡುಗಿದರು. 50 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ರೈತರಿಗೆ ನೀರಿನ ಸೌಲಭ್ಯ ನೀಡಿದ್ರೆ ಬಂಗಾರದ ಬೆಳೆ ಬೆಳೆಯುತ್ತಿದ್ದರು.

ಕಳೆದ ಐವತ್ತು ವರ್ಷದಲ್ಲಿ ಕಾಂಗ್ರೆಸ್ ಸರಿಯಾದ ಆಡಳಿತ ನಡೆಸಿದ್ರೆ ರೈತನಿಗೆ ಈ ಸ್ಥೀತಿ ಬರುತ್ತಿತ್ತೇ..? ಕಾಂಗ್ರೆಸ್ ನವರಿಗೆ  ರೈತರಿಗೆ ನೀರು ಕೋಡೊದು ಬೇಕಿರಲಿಲ್ಲ ಅವರಿಗೆ ಹಣ ಹೊಡೆದು ರಾಜಕಾರಣಿಗಳ ತೀಜೊರಿ ತುಂಬಿಸಬೇಕಿತ್ತು ಎಂದರು.

ಇನ್ನು ಒಂದು ವೇಳೆ ಮೋದಿ ಚುನಾವಣೆಯಲ್ಲಿ ಮೋದಿ ಗೆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಜಿ ಪ್ರಧಾನಿ ದೇವೆಗೌಡ ಹೇಳಿದ್ರು ೨೦೧೪ ರ ವೇಳೆ. ಆದ್ರೆ ಅದೇ ಸಂದರ್ಭದಲ್ಲಿ ಹೇಳಿದ್ದೆ. ಆದರಣೀಯ ಗೌಡ್ರೆ ನೀವು ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯ ಇಲ್ಲಾ. ನೀವು ಇನ್ನಷ್ಟು ವರ್ಷ ಬದುಕಬೇಕೆಂದು ಹೇಳಿದ್ದೆ. ಆದ್ರೆ ಕಾಂಗ್ರೆಸ್ಸ್ ನವರು ಪ್ರತಿದಿನ ಹೊಸ ಹೊಸ ಸುಳ್ಳು ಹೇಳುತ್ತಿದ್ದಾರೆ. ನೀವೆ ಗಮನಿಸಿ ಯಾವುದೇ ಸಮೀಕ್ಷೆ ನೋಡಿ ಜೆಡಿಎಸ್ ಗೆ ಮೂರನೇ ಸ್ಥಾನ, ಯಾವುದೇ ಕಾರಣಕ್ಕೂ ಜೆಡಿಎಸ್ ಸರ್ಕಾರ ರಚನೆ ಸಾಧ್ಯವಿಲ್ಲ. ಬಿಜೆಪಿ ಯಿಂದ ಮಾತ್ರ ಸರ್ಕಾರ ರಚನೆ ಸಾಧ್ಯ ಎಂದು ಹೇಳಿದರು. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಒಳ ಒಪ್ಪಂದ ಇದೆ. ಬೆಂಗಳೂರಿನ ಬಿಬಿಎಂಪಿ ಯಲ್ಲಿನ ಈ ಪಕ್ಷಗಳ ಮೈತ್ರಿ ಏನನ್ನ ಸೂಚಿಸುತ್ತೆ… ಎಂದು ಜೆಡಿಎಸ್ ಪಕ್ಷದ ವಿರುದ್ದ ಪಿ.ಎಂ ವಾಗ್ದಾಳಿ ನಡೆಸಿದರು.

ಇನ್ನು ತುಮಕೂರಲ್ಲೂ ಈ ರೀತಿಯ ಒಳ ಒಪ್ಪಂದ ನಡೆದಿದೆ. ಈ ನಾಟಕ ನಿಲ್ಲಿಸಬೇಕು. ಕಲ್ಪತರು ನಾಡು ಎಂದೇ ಪ್ರಸಿದ್ದವಾದ ಈ ನಾಡಿಗೆ ರೈತರ ಜೊತೆ ನಿಲ್ಲುವ ಕೆಲಸವನ್ನ ಇಲ್ಲಿನ ಸರ್ಕಾರ ಮಾಡಿಲ್ಲ. ರೈತರಿಗೆ ಏನೇ ಆಗ್ಲಿ,ಸಂಕಷ್ಟದಲ್ಲಿರಲಿ ಆದ್ರೆ ಮಂತ್ರಿಗಳ ತೀಜೊರಿ ತುಂಬುವ ನೀತಿ ಈ ಸರ್ಕಾರದಲ್ಲಿದೆ.

ತೆಂಗು ರಪ್ತಿನಲ್ಲಿ ನಾವು ಶೇ ೬೦ ರಷ್ಟು ಪ್ರಗತಿ ಸಾಧಿಸಿ ರೈತರ ನೆರವಿಗೆ ನಿಂತಿದ್ದೇವೆ. ಹಿಂದೆ ತುಮಕೂರು ಜಿಲ್ಲೆಗೆ ಅನೇಕ ಯೋಜನೆಗಳನ್ನ ನಮ್ಮ ಸರ್ಕಾರ ನೀಡಿದೆ. ಭದ್ರ ಮೇಲ್ದಂಡೆ ಯೋಜನೆಯ ನೆನೆಗುದಿಗೆ ಬಿದ್ದಿದೆ.ಇದರಲ್ಲಿ ಕಾಂಗ್ರೆಸ್ ಏನ್ ಮಾಡ್ತಿದೆ ಅನ್ನೋದನ್ನ ತಿಳಿದುಕೊಳ್ಳಲು ಇಚ್ಚಿಸುತ್ತೇನೆ. ಹೇಮವತಿ ನೀರು ಯಾಕೆ ತುಮಕೂರಿಗೆ ನೀಡಲಾಗ್ತಿಲ್ಲ…? ಕುಡಿಯುವ ನೀರಿನ ಯೋಜನೆಯಿಂದ ಇನ್ನೂ ಯಾಕೆ ನೀರು ಕೊಡಲಾಗಿಲ್ಲ..? ಅದನ್ನ ನಾನು ಕಾಂಗ್ರೆಸ್ ನವರಿಗೆ ಕೇಳಲು ಇಚ್ಚಿಸುತ್ತೇನೆ. ೧ ಲಕ್ಷ ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನ ನಾವು ಕೈಗೆತ್ತಿಕೊಂಡಿದ್ದೇವೆ. ನಮ್ಮ ಸರ್ಕಾರ ಸಣ್ಣನೀರಾವರಿ,ತುಂತುರು ಯೋಜನೆಗಳ ಜಾರಿಗೆ ಒತ್ತು ಕೊಟ್ಟಿದ್ದೇವೆ. ಅಟಲ್ ಬಿಹಾರಿ ಅವರ ಕನಸು ನದಿಗಳ ಜೊಡಣೆ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಇಲ್ಲೂ ಕೂಡ ಹೇಮವತಿ ನೇತ್ರಾವತಿ ನದಿ ಜೋಡಣೆ ಕೆಲಸವನ್ನ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.

Karnataka assembly election,PM Modi,Tumakuru

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ