ಶಿವಮೊಗ್ಗದಲ್ಲಿ 17 ಲಕ್ಷ ಬಡವರ ಮನೆಗೆ ಎಲ್‌ಪಿಜಿ: ಮೋದಿ ಹೇಳಿಕೆ

ಶಿವಮೊಗ್ಗ: ಬಡವರ ಮನೆಯಲ್ಲಿ ದೀಪ ಉರಿಸುವ ಯೋಜನೆ ಹಿನ್ನೆಲೆ ಶಿವಮೊಗ್ಗವೊಂದಲ್ಲೇ ಸುಮಾರು 17 ಲಕ್ಷ ಬಡವರ ಮನೆಗಳಿಗೆ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಎನ್‌ಇಎಸ್ ಮೈದಾನದಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೆ 9ರ ಬದಲಾಗಿ 12 ಸಿಲಿಂಡರ್ ಕೊಡುತ್ತೇವೆ ಎಂದಿತ್ತು. ಆದರೆ, ಈ ವಿಚಾರದಲ್ಲಿ ಬಡವರಿಗೆ ಗ್ಯಾಸ್ ಕೊಡುವ ಕುರಿತಾಗಿ ಚಿಂತೆ ಮಾಡಿಲ್ಲ. ಒಂದು ಕಾಲವಿತ್ತು. ಗ್ಯಾಸ್ ಕನೆಕ್ಷನ್ ಬೇಕಿದ್ದರೆ ರಾಜಕೀಯ ನಾಯಕರ ಮನೆಗೆ ತೆರಳಿ ಪಡೆಯಬೇಕಿತ್ತು ಟೀಕಿಸಿದರು.

ಆದರೆ, ಬಿಜೆಪಿ ಇದಕ್ಕೆ ಬದಲಾವಣೆ ಮಾಡಿ, 4 ಕೋಟಿ ಮನೆಗಳಿಗೆ ಉಚಿತ ಸಂಪರ್ಕ, 9 ಲಕ್ಷ ಸಂಪರ್ಕ ಕರ್ನಾಟಕವೊಂದರಲ್ಲೇ ನೀಡಿದ್ದು, ಶಿವಮೊಗ್ಗದಲ್ಲಿ 17 ಲಕ್ಷ ಬಡವರ ಮನೆಗೆ, ದಲಿತರು, ಆದಿವಾಸಿಗಳ ಮನೆಗೆ ಎಲ್‌ಪಿಜಿ ಸಂಪರ್ಕ ನೀಡಿದ್ದೇವೆ ಎಂದರು.
ಆದರೆ, ಈ ಯೋಜನೆಯನ್ನು ಕಾಂಗ್ರೆಸ್ ತಮ್ಮದೆಂದು ಬಿಂಬಿಸಿಕೊಂಡು, ತಮ್ಮ ಚಿತ್ರ ಅಂಟಿಸಿಕೊಳ್ಳಲು ಯತ್ನಿಸುತ್ತಿದೆ. ಇದರಿಂದ ನನಗೇನೂ ತೊಂದರೆಯಿಲ್ಲ. ಆದರೆ, ಇದನ್ನು ನಮ್ಮದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ