ಬಡವರಿಗೆ ಕಾಂಗ್ರೆಸ್ ಅವಮಾನ: ಪ್ರಧಾನಿ ಮೋದಿ ವಾಗ್ದಾಳಿ

ಶಿವಮೊಗ್ಗ:ಮೇ-5: ರಾಜಕೀಯದಲ್ಲಿ ಮತಬೇಧ, ಆರೋಪ ಪ್ರತ್ಯಾರೋಪಗಳು ಇರುತ್ತವೆ. ಆದರೆ ಬಿ.ಎಸ್. ಯಡಿಯೂರಪ್ಪ ಅವರ ಹೋರಾಟವನ್ನು ಪರಿಗಣಿಸದೇ ಅವರ ವಿರುದ್ಧ ಕೀಳಾಗಿ ಮಾತನಾಡುವ ಕಾಂಗ್ರೆಸ್‌ಗೆ ಈ ಬಾರಿ ತಕ್ಕ ಪಾಠ ಕಲಿಸಿ ಎಂದು ಮೋದಿ ಹೇಳಿದ್ದಾರೆ.

ಇಂದು ಸಂಜೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಗಳು ಸಾಮಾನ್ಯ. ಆದರೆ, ಕಾಂಗ್ರೆಸ್‌ನ ಇಂತಹ ಮನಃಸ್ಥಿತಿಗೆ ತಕ್ಕ ಪಾಠ ಕಲಿಸಿ, ಅವರಿಗೆ ಠೇವಣಿ ಇಲ್ಲದಂತೆ ಮಾಡಬೇಕು ಎಂದರು.

ಯಡಿಯೂರಪ್ಪ ರಾಜ್ಯದಾದ್ಯಂತ ಗ್ರಾಮ ಗ್ರಾಮಗಳಿಗೆ ತೆರಳಿ ಜನಸಾಮಾನ್ಯರ ಕಷ್ಟ ಅರಿತಿದ್ದಾರೆ. ರಸ್ತೆ ರಸ್ತೆಗಳಲ್ಲಿ ಜನರಿಗಾಗಿ ತಿರುಗಿದ್ದಾರೆ. ಇದಕ್ಕಾಗಿ ಬಡವರ ಮನೆಯಲ್ಲಿ ಅವರು ಉಳಿದಿದ್ದಾರೆ. ಆದರೆ, ಈ ರೀತಿ ಬಡವರ ಮನೆಯಲ್ಲಿ ಉಳಿದದ್ದನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದೆ. ಇದು ಬಡವರಿಗೆ ಮಾಡಿದ ಅವಮಾನ ಎಂದು ಮೋದಿ ಕಿಡಿ ಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ