ಶ್ರೀರಾಮುಲು ನಮಗೆ ಹೆವಿವೇಟ್ ಸ್ಪರ್ಧಿಯಲ್ಲ; ಸಿಎಂ ಸಿದ್ದರಾಮಯ್ಯ

ಬಾದಾಮಿ;ಮೇ-5: ಹೆಚ್ ಡಿ ಕುಮಾರಸ್ವಾಮಿ ಓರ್ವ ಹಿಟ್ ಆ್ಯಂಡ್ ರನ್ ಕೇಸ್ ವ್ಯಕ್ತಿ. ಆತ ಓರ್ವ ಮಹಾ ಸುಳ್ಳುಗಾರ ಇಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಒಂದೆ ಸಮಾನ ಅವರಿಗಿಂತ ನಾವು ತುಂಬಾ ಮುಂದೆ ಇದ್ದೇವೆ. ಅಜಗಜಾಂತರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಾದಾಮಿ ಪಟ್ಟಣದಲ್ಲಿ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ, ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಹಿಂದೆಯೂ ಕ್ಲೋಜ್ ಆಗಿದ್ದರು. ಈಗಲೂ ಕ್ಲೋಜ್ ಆಗಿದ್ದಾರೆ ಶ್ರೀ ರಾಮುಲು ನಮ್ಮ ಮುಂದೆ ಹೆವಿವೇಟ್ ಸ್ಪರ್ಧಿಯಲ್ಲ ಲೈಟ್ ವೇಟ್ ಸ್ಪರ್ಧಿ ಎಂದರು.

ಸಿಎಮ್ ಪರ ಸಿನಿಮಾ ನಟರ ಪ್ರಚಾರಕ್ಕೆ ಹೆಚ್ ಡಿಕೆ ವ್ಯಂಗ್ಯಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಹೆಚ್ ಡಿಕೆ ಸೋಲಿನ ಭಯದಿಂದ ಏನೇನೊ ಹೇಳುತ್ತಾರೆ. ಪ್ರಚಾರದ ಬಗ್ಗೆ ಏನೂ ಗೊತ್ತಿಲ್ಲ ಎಂದರು.

ಸ್ಥಳೀಯ ಮುಖಂಡರು ಎಲ್ಲಿಗೆ ಕರೆದೊಯ್ಯುತ್ತಾರೊ ಅಲ್ಲಿ ಪ್ರಚಾರ ಮಾಡುತ್ತೇನೆ. ಶಿವಯೋಗಮಂದಿರ ಭೇಟಿ ಬಗ್ಗೆ ಗೊತ್ತಿಲ್ಲ. ಬಾದಾಮಿ ಬಗ್ಗೆ ನಿಮ್ಮ ಅಬ್ಸರ್ವೇಶನ್ ಹೇಗಿದೆ ಎಂದು ಮಾದ್ಯಮದವರನ್ನೆ ಪ್ರಶ್ನಿಸಿದರು.

ಇನ್ನು ಭ್ರಷ್ಟಾಚಾರ ದ ಬಗ್ಗೆ ರಾಮುಲು ಬಹಿರಂಗ ಚರ್ಚೆ ಸವಾಲಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅವರು ಎಲ್ಲಿ ಬರುತ್ತಾರೋ ಹೇಳಲಿ ನಾನು ಅಲ್ಲಿಗೆ ಬರುತ್ತೇನೆ. ಜೈಲಿಗೆ ಹೋಗಿ ಬಂದ ಯಡಿಯೂರಪ್ಪ, ಜನಾರ್ದನ ರೆಡ್ಡಿ ಪಕ್ಕದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಇವರೇನು ಮಾತನಾಡುತ್ತಾರೆ ಎಂದು ಪ್ರೆಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ