ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿರುವುದು ಹೆಮ್ಮೆಯ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಬಿಹಾರದ ಜನತೆಗೆ ಪ್ರಧಾನಮಂತ್ರಿ ಅವರು ಬರೆದಿರುವ ಬಹಿರಂಗ ಪತ್ರದಲ್ಲಿ, ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರ ಹಾಗೂ ಬಿಹಾರದ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ವಿಶೇಷ ಪ್ರಯತ್ನಗಳಿಂದ ಬಿಹಾರ ಈ ದಶಕದಲ್ಲಿ ಅಭಿವೃದ್ಧಿಯ ಹೊಸ ಮೈಲುಗಲ್ಲು ಸಾಧಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಬಿಹಾರದ ಅಭಿವೃದ್ಧಿಗೆ ತಾವು ಬದ್ಧವಿರುವುದಾಗಿ ಪ್ರಧಾನಮಂತ್ರಿ ಹೇಳಿದ್ದಾರೆ. ಎನ್ಡಿಎ ಸರ್ಕಾರದ ಅವಧಿಯಲ್ಲಿ ಬಿಹಾರ ಅಭಿವೃದ್ಧಿ ಕಂಡಿದೆ. ಈ ಸಂಬಂಧ ತನ್ನ ರಿಪೋರ್ಟ್ ಕಾರ್ಡ್ಅನ್ನು ಸಹ ಜನರ ಮುಂದಿಟ್ಟಿದೆ. ಎನ್ಡಿಎ ಸರ್ಕಾರ ಮಾತ್ರ ಬಿಹಾರದಲ್ಲಿ ಅಭಿವೃದ್ಧಿಯ ವೇಗವನ್ನು ಸುಸ್ಥಿರವಾಗಿ ಕಾಯ್ದುಕೊಳ್ಳಲಿದೆ ಎಂಬ ನಂಬಿಕೆ ಬಿಹಾರದ ಜನರಲ್ಲಿದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ವಿದ್ಯುತ್ಛ್ಕ್ತಿ, ನೀರು, ರಸ್ತೆ, ಶಿಕ್ಷಣ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಲಯಗಳಲ್ಲಿ ಬಿಹಾರದಲ್ಲಿ ಎನ್ಡಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಪತ್ರದಲ್ಲಿ ವಿವರಿಸಿದ್ದಾರೆ.
Related Articles
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸ್ವಾಗತಿಸಿದ ಮೋದಿ
February 23, 2018
Samachar Network
ರಾಷ್ಟ್ರೀಯ
Comments Off on ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಸ್ವಾಗತಿಸಿದ ಮೋದಿ
Seen By: 86 ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ಭವನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ [more]
ಪೆಗಾಸಸ್ ಗೂಢಚರ್ಯೆ ವಿಪಕ್ಷ ಆರೋಪ: ಆಧಾರರಹಿತ ಗುಲ್ಲು
July 26, 2021
Varta Mitra News - SP
ರಾಷ್ಟ್ರೀಯ
Comments Off on ಪೆಗಾಸಸ್ ಗೂಢಚರ್ಯೆ ವಿಪಕ್ಷ ಆರೋಪ: ಆಧಾರರಹಿತ ಗುಲ್ಲು
Seen By: 85 ಪೆಗಾಸಸ್ ಗೂಢಚರ್ಯೆ ಕುರಿತಂತೆ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಆಧಾರರಹಿತ ಗುಲ್ಲಾಗಿದೆ. ವಿರೋಧಪಕ್ಷಗಳಿಗೆ ಜನರ ಮುಂದೆ ಒಯ್ಯಲು ಯಾವುದೇ ವಿಷಯವಿಲ್ಲದ್ದರಿಂದ ಅವರು ಈ [more]
ಸಿಖ್ ನರಮೇಧ ಭಯೋತ್ಪಾದನೆಯಲ್ಲವೇ?: ಕಾಂಗ್ರೆಸ್ಗೆ ಮೋದಿ ಎದಿರೇಟು
April 20, 2019
Samachar Network-NP
ರಾಷ್ಟ್ರೀಯ, ರಾಜಕೀಯ, ಪ್ರಧಾನಿ ಮೋದಿ
Comments Off on ಸಿಖ್ ನರಮೇಧ ಭಯೋತ್ಪಾದನೆಯಲ್ಲವೇ?: ಕಾಂಗ್ರೆಸ್ಗೆ ಮೋದಿ ಎದಿರೇಟು
Seen By: 54 ಹೊಸದಿಲ್ಲಿ: ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಪ್ರಧಾನಿ ನರೇಂದ್ರ [more]