ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ; 7ನೇ ಬಾರಿಗೆ ಆಯವ್ಯಯ ಮಂಡಿಸುತ್ತಿರುವ ಬಿಎಸ್​ವೈ

ಬೆಂಗಳೂರು: ಇದುವರೆಗೂ ಆರು ಬಜೆಟ್ಗಳನ್ನು ಮಂಡನೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಏಳನೇ ಆಯವ್ಯಯ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿಎಸ್ವೈ ಸದನದಲ್ಲಿ ಬಜೆಟ್ ಪ್ರತಿ ಓದಲಿದ್ದಾರೆ.

ಈ ಬಾರಿ ಬಜೆಟ್ ಗಾತ್ರ 2.50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಸಂಕಷ್ಟ, ರಾಜ್ಯ ಸರ್ಕಾರ ಮೇಲಿನ ಸಾಲ, ಕೇಂದ್ರದ ಜಿಎಸ್​ಟಿ ಪರಿಹಾರ ಸಕಾಲಕ್ಕೆ ಬಾರದಿರುವುದು.. ಈ ಎಲ್ಲಾ ಸಂಕಷ್ಟಗಳ ನಡುವೆ ಬಿಎಸ್​ವೈ ಬಹುನಿರೀಕ್ಷೆಯ ಬಜೆಟ್​ ಮಂಡಿಸಲಿದ್ದಾರೆ.

ಬಿಎಸ್​ವೈ ಅವರ ಹಿಂದಿನ ಆರು ಬಜೆಟ್​ಗಳನ್ನು ಗಮನಿಸಿದಾಗ ಅವರ ಪ್ರತಿ ಬಜೆಟ್​ನಲ್ಲೂ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದು ಕೃಷಿಗಾಗಿ ಪ್ರತ್ಯೇಕ ಬಜೆಟ್ ಹೊರಡಿಸುವ ಮೂಲಕ ತಾವು ಅಪ್ಪಟ ರೈನ ನಾಯಕ ಎಂದು ತೋರಿಸಿಕೊಟ್ಟಿದ್ದರು. ಅದಾದ ಬಳಿಕ ಹೈಸ್ಕೂಲ್ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್​, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಮಠಗಳಿಗೆ ಅನುದಾನವನ್ನು ಬಜೆಟ್​ನಲ್ಲಿ ಮೊದಲ ಬಾರಿಗೆ ಮೀಸಲಿಟ್ಟ ಹೆಗ್ಗಳಿಕೆ ಬಿಎಸ್​ವೈ ಅವರಿಗೆ ಸಲ್ಲುತ್ತದೆ. ಈ ಹಿಂದಿನ ಬಜೆಟ್​ಗಳಂತೆ ಈ ಬಾರಿಯೂ ಬಿಎಸ್​ವೈ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಬಜೆಟ್​ ನೀಡುತ್ತಾರೆ ಎಂದು ಹಲವರು ನಿರೀಕ್ಷಿಸುತ್ತಿರಬಹುದು. ಆದರೆ, ರಾಜ್ಯದ ಇಂದಿನ ಆರ್ಥಿಕ ಸ್ಥಿತಿಗತಿಗಳನ್ನು ನೋಡಿ ಹೇಳುವುದಾದರೆ ಈ ಬಾರಿಯ ಬಜೆಟ್ ವೆಚ್ಚ ಕಡಿತದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ