ಸಿಎಂ ಆಯವ್ಯಯ ಭಾಷಣ ಆರಂಭವಾಗುತ್ತಿದ್ದಂತೆ ಬಜೆಟ್​ ಪುಸ್ತಕಗಳಿಗಾಗಿ ಗದ್ದಲವೆಬ್ಬಿಸಿದ ವಿಪಕ್ಷ ನಾಯಕರು

ಬೆಂಗಳೂರು; ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇಂದು 7ನೇ ಮತ್ತು ಅವಧಿಯ ಚೊಚ್ಚಲ ಬಜೆಟ್ಮಂಡಿಸಲು ಮುಂದಾದರು. ಆದರೆ, ಅವರು ಬಜೆಟ್ಮೇಲಿನ ಭಾಷಣ ಆರಂಭಿಸುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಎದ್ದುನಿಂತು ತಮಗೆ ಬಜೆಟ್ಪ್ರತಿ ನೀಡಿವಂತೆ ಗದ್ದಲ ಎಬ್ಬಿಸಿರುವ ಘಟನೆ ನಡೆದಿದೆ.

ಬಜೆಟ್​ ಮೇಲಿನ ಭಾಷಣ ಆರಂಭವಾಗುತ್ತಿದ್ದಂತೆ ಅದರ ಸಂಪೂರ್ಣ ಮಾಹಿತಿ ಇರುವ ಪ್ರತಿ ಸದನದ ಎಲ್ಲಾ ಸದಸ್ಯರಿಗೆ ನೀಡುವುದು ಸಂಪ್ರದಾಯ. ಆದರೆ, ಈ ಬಾರಿ ಬಿಜೆಪಿ ಬಜೆಟ್​ ಮುಗಿಯುವವರಿಗೆ ಯಾರಿಗೂ ಬಜೆಟ್ ಪ್ರತಿ ನೀಡಲಾಗುವುದಿಲ್ಲ ಎಂದು ಹೇಳಿತ್ತು. ಹೀಗಾಗಿ ವಿರೋಧ ಪಕ್ಷದವರು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್​ ನಾಯಕ ಆರ್​.ವಿ. ದೇಶಪಾಂಡೆ ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದರು. ಅಲ್ಲದೆ, ದೊಡ್ಡ ಮಟ್ಟದಲ್ಲಿ ಗದ್ದಲ ಎಬ್ಬಿಸಿದರು.

ಇದರಿಂದಾಗಿ ಸದನದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾನವಾಯಿತು. ಈ ವೇಳೆ ಸ್ಪಷ್ಟನೆ ನೀಡಿದ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, “ಕಳೆದ ವರ್ಷ ನೀವು ಆರಂಭಿಸಿದ ಸಂಪ್ರದಾಯವನ್ನೇ ಈ ವರ್ಷ ನಾವು ಮುಂದುವರೆಸುತ್ತಿದ್ದೇವೆ” ಎಂದು ಸ್ಪಷ್ಟೀಕರಣ ನೀಡಿದರು. ಆದರೂ, ವಿರೋಧ ಪಕ್ಷಗಳ ನಾಯಕರು ಸ್ಪೀಕರ್​ ಮಾತಿಗೆ ಮನ್ನಣೆ ನೀಡಿಲ್ಲ.

ಹೀಗಾಗಿ ಕೊನೆಗೂ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಎಲ್ಲರಿಗೂ ಬಜೆಟ್​ ಪ್ರತಿ ನೀಡುವ ಭರವಸೆ ನೀಡಿದ ನಂತಹ ಬಜೆಟ್​ ಮೇಲಿನ ಭಾಷಣ ಮುಂದುವರೆಯಲು ವಿರೋಧ ಪಕ್ಷಗಳು ಅನುವು ಮಾಡಿಕೊಟ್ಟಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ