ಕಂದಕಕ್ಕೆ ಉರುಳಿದ ಬಸ್-ಭೀಕರ ಘಟನೆಯಲ್ಲಿ 26 ಮಂದಿ ಸಾವು

ಜಕಾರ್ತ,ಡಿ.24- ಪ್ರಯಾಣಿಕರಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ 26 ಮಂದಿ ಮೃತಪಟ್ಟು ಇತರ 14 ಪ್ರಯಾಣಿಕರು ಗಾಯಗೊಂಡ ಭೀಕರ ಘಟನೆ ನಿನ್ನೆ ತಡರಾತ್ರಿ ಇಂಡೋನೇಷ್ಯಾದ ದಕ್ಷಿಣಸುಮಾತ್ರ ಪ್ರಾಂತ್ಯದಲ್ಲಿ ಸಂಭವಿಸಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಗರಲಮ್ ಜಿಲ್ಲೆಯ ಪೆರಾಹು ಡಿಪೋ ಗ್ರಾಮದಲ್ಲಿ ನಿನ್ನೆ ರಾತ್ರಿ 11.25ರಲ್ಲಿ ಈ ಘಟನೆ ಸಂಭವಿಸಿದೆ. 40ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಬಸ್ ಪರ್ವತಮಯ ಪ್ರದೇಶದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿಬಿತ್ತು.

ಈ ಘಟನೆಯಲ್ಲಿ 26 ಪ್ರಯಾಣಿಕರು ಮೃತಪಟ್ಟು 14 ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲೆಯ ಬರೇಮು ಆಸ್ಪತ್ರೆಗೆ ಸೇರಿಸಲಾಗಿದೆ.
ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ