ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ರವರಿಗೆ ನೈತಿಕ ಬೆಂಬಲ

ನವದೆಹಲಿ, ಸೆ.3-ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕನಕಪುರ ಹಾಗೂ ರಾಮನಗರ ಜಿಲ್ಲೆಯ ಕೆಲವು ಮುಖಂಡರು ನವದೆಹಲಿಯಲ್ಲಿ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಿದರು.

ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ಕಳೆದ ನಾಲ್ಕು ದಿನಗಳಿಂದಲೂ ದೆಹಲಿಯಲ್ಲಿ ನಡೆಯುತ್ತಿದೆ.ದೆಹಲಿಯಲ್ಲಿರುವ ಕೆಲವು ಕಾಂಗ್ರೆಸ್ ನಾಯಕರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದರು.

ಇಂದು ಬೆಳಗ್ಗೆ ಕನಕಪುರ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಬಹಳಷ್ಟು ನಾಯಕರು ಭೇಟಿ ಮಾಡಿದ್ದರು.ಈ ಸಂದರ್ಭದಲ್ಲಿ ಕಬ್ಬಾಳಮ್ಮ ದೇವಾಲಯದ ಅರ್ಚಕರಾದ ಕಬ್ಬಾಳೇಗೌಡ ಅವರು, ದೇವಿಯ ಕುಂಕುಮಾರ್ಚನೆಯ ಕುಂಕುಮವನ್ನು ಡಿ.ಕೆ.ಶಿವಕುಮಾರ್ ಅವರ ಹಣೆಗೆ ತಿಲಕವಿಟ್ಟು, ಆಶೀರ್ವದಿಸಿದರು.

ಸಂಕಷ್ಟ ಸಮಯದಿಂದ ಬೇಗ ಹೊರಬನ್ನಿ, ನಿಮ್ಮ ಜೊತೆ ನಾವಿದ್ದೇವೆ. ಯಾವುದಕ್ಕೂ ಹೆದರಬೇಡಿ ಎಂದು ಕ್ಷೇತ್ರದ ಮತದಾರರು ಬೆಂಬಲ ಸೂಚಿಸಿದರು ಎಂದು ಹೇಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ