ಭಾರೀ ಮಳೆ ಹಿನ್ನಲೆ-18 ರೈಲುಗಳ ಸಂಚಾರ ರದ್ದು

ಬೆಂಗಳೂರು, ಆ.8- ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಹಲವೆಡೆ ಭಾರೀ ಮಳೆಯಿಂದಾಗಿ ಹಳಿಗಳು ಜಲಾವೃತವಾಗಿರುವುದರಿಂದ ಕೆಲವು ಮಾರ್ಗಗಳ 18 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ನೈರುತ್ಯ ರೈಲ್ವೆ ವಲಯ ಇಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಪಚಾಪುರ, ಗೋಕಾಕ ಮತ್ತು ಪುಣೆಯ ಕೆಲವು ಭಾಗಗಳಲ್ಲಿ ಕುಂಭದ್ರೋಣ ಮಳೆಯಿಂದಾಗಿ ಹಳಿಗಳ ಮೇಲೆ ನೀರು ನಿಂತಿದೆ. ಇದರಿಂದಾಗಿ 18 ರೈಲುಗಳು ಸಂಚಾರ ರದ್ದುಗೊಳಿಸಲಾಗಿದೆ ಎಂದು ಹುಬ್ಬಳ್ಳಿಯಲ್ಲಿರುವ ನೈರುತ್ಯ ವಲಯ ರೈಲ್ವೆ ತಿಳಿಸಿದೆ.

ಇದೇ ಕಾರಣದಿಂದ ಇನ್ನೂ ಕೆಲವು ರೈಲುಗಳ ಸಂಚಾರ ವಿಳಂಭವಾಗಿದ್ದು, ಅವುಗಳ ಮಾರ್ಗವನ್ನು ಸಹ ಬದಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ