ಸಿದ್ದಾರ್ಥ್ ಅವರ ಹುಡುಕಾಟಕ್ಕೆ ಕರಾವಳಿ ಕಾವಲು ಪಡೆ

ಮಂಗಳೂರು, ಜು.30- ಉದ್ಯಮಿ ಸಿದ್ದಾರ್ಥ್ ಅವರು ನಿಗೂಢವಾಗಿ ಕಣ್ಮರೆಯಾಗಿರುವುದರಿಂದ ಅವರ ಹುಡುಕಾಟಕ್ಕೆ ಕರಾವಳಿ ಕಾವಲು ಪಡೆ ಕರೆಸಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಮಂಗಳೂರು ಪಂಪ್‍ಹೌಸ್ ಬಳಿಯ ನೇತ್ರಾವತಿ ನದಿ ಸೇತುವೆ ಸಮೀಪ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ್ ಅವರು ಈ ಸ್ಥಳದಲ್ಲಿ ನಾಪತ್ತೆಯಾಗಿರುವುದರಿಂದ ಅವರನ್ನು ಹುಡುಕುವುದರಲ್ಲೇ ತಮ್ಮ ಗಮನ ಕೇಂದ್ರಿಕೃತವಾಗಿದ್ದು, ಎಲ್ಲಾ ರೀತಿಯಲ್ಲೂ ಶೋಧ ಕಾರ್ಯ ನಡೆಯುತ್ತಿದೆ ಎಂದರು.

ಕಾರವಾರದಿಂದ ಮುಳುಗು ತಜ್ಞರನ್ನು ಕರೆಸಿಕೊಂಡು ಶೋಧ ನಡೆಸಲಾಗುತ್ತಿದೆ. ಹುಡುಕಾಟ ಕೈಗೊಂಡು ಸುಮಾರು 15 ಗಂಟೆಯಾದರೂ ಸುಳಿವು ಸಿಕ್ಕಿಲ್ಲ. ಘಟನೆ ಬಗ್ಗೆ ಪೊಲೀಸ್ ಇಲಾಖೆ ಸಹ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಎಲ್ಲಾ ರೀತಿಯ ಎಫರ್ಟ್ ಹಾಕಿ ಹುಡುಕಾಟ ನಡೆಸಲಾಗುತ್ತಿದೆ. ಎಲ್ಲಾ ಪಡೆಗಳನ್ನೂ ಶೋಧಕ್ಕೆ ಬಳಸಿಕೊಳ್ಳಲಾಗುತ್ತಿದೆ. ಬೆಳಗೆಯಿಂದಲೂ ಮಳೆ ಸುರಿಯತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೂ ಹುಡುಕಾಟ ನಡೆಸುತ್ತಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ