ಜನರ ನಿರೀಕ್ಷೆಗೆ ಸ್ಪಂಧಿಸುವ ಕೆಲಸ ಮಾಡಿದದೇನೆ-ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.24-ನನಗೆ ನನ್ನ ಕೆಲಸ ತೃಪ್ತಿತಂದಿದೆ.ಸದ್ಯ ಎಲ್ಲವೂ ಮುಗಿದಿದೆ.ಜನರ ನಿರೀಕ್ಷೆಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನುಗಳು ಕೇವಲ ಪುಸ್ತಕದಲ್ಲಿದ್ದರೆ ಸಾಲದು.ಅವು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಮತ್ತು ಸರಿಯಾಗಿ ಪಾಲನೆಯಾಗಬೇಕು ಎಂದು ತಿಳಿಸಿದರು.

ಅತೃಪ್ತ ಶಾಸಕರು ಈಗ ತೃಪ್ತರಾಗಿರಬಹುದು.ಈಗ ಎಲ್ಲ ಮುಗಿದಿದೆ.ಮುಂದಿನ ನಡಾವಳಿಗಳನ್ನು ರಾಜ್ಯಪಾಲರು ನೋಡಿಕೊಳ್ಳುತ್ತಾರೆ ಎಂದರು.
ಅತೃಪ್ತ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ರಮೇಶ್‍ಕುಮಾರ್, ಎಲ್ಲವೂ ಕಾನೂನು ರೀತಿಯಲ್ಲೇ ನಡೆಯಲಿವೆ. ನನ್ನಲ್ಲಿ ಪಕ್ಷಪಾತ ಯಾವುದೂ ಇಲ್ಲ. ಜನರ ನಿರೀಕ್ಷೆಗೆ ಸ್ಪಂದಿಸುತ್ತೇನೆ. ಉಳಿದದ್ದನ್ನು ರಾಜ್ಯಪಾಲರು ಮಾಡುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ