ಸುಪ್ರೀಂಕೋರ್ಟ್​​ನಲ್ಲಿ ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ; ವಿಶ್ವಾಸಮತ ಯಾಚನೆಗೆ ಸಿಗಲಿದೆ ಗಡುವು?

ಬೆಂಗಳೂರು : ಸುಪ್ರೀಂ ಕೋರ್ಟ್​​​ನಲ್ಲಿ ಇಂದು ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಮುಕುಲ್​ ರೋಹ್ಟಗಿ ನೇತೃ್ತ್ವದ ಪೀಠ ಈ ಅರ್ಜಿ ವಿಚಾರಣೆ ಮಾಡಲಿದೆ.

ನಮ್ಮ ಮೇಲೆ ದಿನೇ ದಿನೆ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ಶೀಘ್ರವೇ ವಿಶ್ವಾಸಮತಕ್ಕೆ ಸೂಚನೆ ನೀಡಬೇಕು. ಅಲ್ಲದೆ, ವಿಶ್ವಾಸ ಮತಕ್ಕೆ ಡೆಡ್​​ಲೈನ್​​​ ನೀಡಬೇಕು ಎಂದು ಪಕ್ಷೇತರ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅರ್ಜಿ ಸಲ್ಲಿಸಿದ್ದಾರೆ.

“ಸಿಎಂಗೆ ವಿಶ್ವಾಸಮತ ಕೋರಲು ಡೆಡ್ ಲೈನ್ ನಿಗದಿಪಡಿಸಿ. 2018ರ ಮೇ 18ರಂದು ಸುಪ್ರೀಂಕೋರ್ಟ್ ಇದೇ ರೀತಿ ಡೆಡ್​​ಲೈನ್ ಕೊಟ್ಟಿತ್ತು. ಈಗಲೂ ಅದೇ ರೀತಿಯ ಅದೇ ರೀತಿಯ ಡೆಡ್​ಲೈನ್ ನೀಡಿ,” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನಿನ್ನೆ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​​ ನಿರಾಕರಿಸಿತ್ತು. ಮಂಗಳವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು. ಇದೇ ವೇಳೆ ಎಚ್​​ಡಿ ಕುಮಾರಸ್ವಾಮಿ, ದಿನೇಶ್ ಗುಂಡೂರಾವ್​ ಪರ ವಕೀಲರು ಅರ್ಜಿ ಕೂಡ ವಿಚಾರಣೆಗೆ ಬರುವ ಸಾಧ್ಯತೆ ಇದೆ. ವಿಪ್​ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾದ ಸ್ಪಷ್ಟ ವಿವರಣೆ ಕೇಳಿ ಇವರು ಅರ್ಜಿ ಸಲ್ಲಿಸಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ