ಪಥ ಬದಲಿಸಿದ ವಾಯು ಚಂಡಮಾರುತ ಮತ್ತೆ ಅಪ್ಪಳಿಸಲಿದೆ ಗುಜರಾತ್ ನ ಕಛ್ ಕರಾವಳಿಗೆ!

ಅಹಮದಾಬಾದ್:ಗುರುವಾರದ ಮಧ್ಯಾಹ್ನದ ವೇಳೆಗೆ ಗುಜರಾತ್ ಕರಾವಳಿಗೆ ಅಪ್ಪಳಿಸುತ್ತದೆ ಎಂದು ಹೇಳಲಾಗಿದ್ದ “ವಾಯು” ಚಂಡಮಾರುತವು ಬುಧವಾರ ರಾತ್ರೋರಾತ್ರಿ ಪಥ ಬದಲಿಸಿದ್ದು, ಇದೀಗ ಮತ್ತೆ ಗುಜರಾತ್ ಕರಾವಳಿಯತ್ತ ಮುಖಮಾಡಿರುವ ವಾಯು ಜೂನ್ 17-18ರಂದು ಕಛ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಬಲ ವಾಯು ಚಂಡ ಮಾರುತ ದಿಢೀರ್ ದಿಕ್ಕು ಬದಲಿಸಿದ್ದರಿಂದ ಗುಜರಾತ್ ನಿರಾಳವಾಗಿತ್ತು. ಆದರೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆರವುಗೊಳಿಸಿದ ಬೆನ್ನಲ್ಲೇ ವಾಯು ಚಂಡಮಾರುತ ಜೂನ್ 16ರಂದು ಮತ್ತೆ ಅಬ್ಬರಿಸಲಿದ್ದು, 17,18ರಂದು ಕಛ್ ಕರಾವಳಿಗೆ ಅಪ್ಪಳಿಸಲಿದೆಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಪಿಟಿಐಗೆ ತಿಳಿಸಿದ್ದಾರೆ.

ದ್ವಾರಕಾ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಡಿಯು ಚಂಡಮಾರುತದ ಪ್ರಭಾವಕ್ಕೆ ಸಿಲುಕಲಿವೆ. ಅಲ್ಲದೆ, ಈ ಭಾಗಗಳಲ್ಲಿ ಗಂಟೆಗೆ 155- 165 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ, ಭೂಮಿ- ಗಿರ್‌-ಸೋಮನಾಥ, ಜುನಾಗಡ, ಪೋರಬಂದರ್‌, ದೇವ ಅಲರ್ಟ್‌ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ