ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ತಕ್ಕ ಪಾಠ : ಗುಲಾಂ ನಬಿ ಆಜಾದ್

ಬೀದರ್: ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಈ ಬಾರಿ ದೇಶದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮನೆಗೆ ಕಳುಹಿಸಲು ಜನರು ನಿರ್ಧರಿಸಿದ್ದು, ಈ ಸಲ ಕೇಂದ್ರದಲ್ಲಿ ರಾಹುಲ್ ಗಾಂಧಿ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ತಳಿಸಿದರು.

ಬಿಜೆಪಿಯವರ ಸುಳ್ಳಿಗೆ ಈಗ ಯಾರೂ ನಂಬಲ್ಲ. ಮೋದಿ 5 ವರ್ಷ ನಿರಂಕುಶ ಆಡಳಿತ ನಡೆಸಿದ್ದಾರೆ. ವಿರೋಧ ಪಕ್ಷಗಳೆಲ್ಲಕ್ಕೂ ಗುರಿಯಾಗಿಸಿಕೊಂಡು ಸಿಬಿಐ, ಐಟಿ ದಾಳಿ ಮಾಡಿಸಿದ್ದಾರೆ. ದೇಶದಲ್ಲಿ ಬಿಜೆಪಿಯವರು ಬಿಟ್ಟರೆ ಉಳಿದವರೆಲ್ಲ ಭ್ರಷ್ಟರೆ? ಎಂದು ಪ್ರಶ್ನಿಸಿದ ಆಜಾದ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಪರಿ ಹುಕುಂಶಾಹಿ ಹಾಗೂ ಸೇಡಿನ ರಾಜಕಾರಣ ಮಾಡಿದ ವಿಶ್ವದ ಮೊದಲ ಪ್ರಧಾನಿ ಮೋದಿ ಎಂದು ಕಿಡಿಕಾರಿದರು.

ಸಚಿವರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್, ಬಂಡೆಪ್ಪ ಖಾಶೆಂಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಚಂದ್ರಾಸಿಂಗ್, ಆನಂದ ದೇವಪ್ಪ, ರಮೇಶ ಪಾಟೀಲ್ ಸೋಲಪುರ, ಬಸವರಾಜ ಬುಳ್ಳಾ ಇತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ