ಮತದಾರರ ಮನವೊಲಿಕೆಗೆ ಗೀತಾ ಖಂಡ್ರೆ ಕೊನೆಯ ಕಸರತ್ತು

ಬೀದರ್: ಲೋಕಸಭಾ ಚುನಾವಣೆ ಗೆ ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ಅಂತ್ಯಗೊಳ್ಳುವ ಈ ಹಿನ್ನೆಲೆಯಲ್ಲಿ ಶನಿವಾರ ಪ್ರಚಾರ ಜೋರಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಪರವಾಗಿ ಅವರ ಪತ್ನಿ ಡಾ ಗೀತಾ ಈಶ್ವರ ಖಂಡ್ರೆ ಚಿಂಚೋಳಿ ತಾಲೂಕಿನಲ್ಲಿ ಬಿರುಸಿನ ಪ್ರಚಾರ‌ ನಡೆಸಿದರು.

ಕಾಳಹಿ, ತೆಂಮಗಳ, ಕೋಟಿಗೊಳ, ಕೂಡಲಿ, ರಟಗಲ್ ಗ್ರಾಮಗಳಲ್ಲಿ ಪಾದ ಯಾತ್ರೆ ಮೂಲಕ ಮನೆ ಮನೆಗಳಿಗೆ ತೆರಳಿ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಮತ ಯಾಚನೆ ಮಾಡಿದರು.

ಬಿಜೆಪಿ ಅವರ ಸುಳ್ಳು ಭಾಷಣಕ್ಕೆ ಈಗ ಯಾರೂ ನಂಬಲ್ಲ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತದೆ. ಈ ಬಾರಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕ್ಷೇತ್ರದಲ್ಲಿ ಮೋದಿ ಹವಾ ಇಲ್ಲ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆ ಈ ಬಾರಿ ಬೆಂಬಲಿಸಲಿದ್ದಾರೆ ಎಂದರು.

ಪ್ರಮುಖರಾದ ಲೋಹರ್, ಶಿವಶರಣಪ್ಪ ಚಿಟಾ, ಶಿವನಾಥ ಪಾಟೀಲ್, ಸಂಜುಕುಮಾರ, ಡಾ ವಿಜಯಲಕ್ಷ್ಮಿ ಗುದ್ಗೆ, ಪಪ್ಪು ಪಾಟೀಲ್ ಖಾನಾಪುರ್, ಸಂಗಮೇಶ್ ಹುಣ್ಣುಜೆ, ಅನಿತಾ ಪಾಟೀಲ್ ಮುಂತಾದವರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ