ತಂದೆ ಪರ ಪುತ್ರ ಸಾಗರ ಬ್ಯಾಟಿಂಗ್

ಬೀದರ್: ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಹಿ ಅವರ ಪುತ್ರ ಸಾಗರ ಖಂಡ್ರೆ ಭಾಲ್ಕಿ ತಾಲೂಕಿನ ವಿವಿಧೆಡೆ ಶುಕ್ರವಾರ ಪ್ರಚಾರ ನಡೆಸಿ, ಮತಯಾಚಿಸಿದರು ಸಿದ್ದೇಶ್ವರ ಗ್ರಾಮದಲ್ಲಿ ಸಿದ್ದೇಶ್ವರ ದೇವರ ದರ್ಶನ ಪಡೆದುಕೊಂಡ ಪ್ರಚಾರ‌ ಮಾಡಿದರು.


ಗ್ರಾಮದ ಪ್ರತಿಯೊಂದು ಮನೆ, ಮನೆಗೆ ತೆರಳಿ ಪ್ರಚಾರ ಮಾಡಿದ ಸಾಗರ ಖಂಡ್ರೆ, ಮೂರು ಬಾರಿ ಶಾಸಕರಾಗಿ ತಂದೆಯವರಾದ ಈಶ್ವರ ಖಂಡ್ರೆ ಬಹಳಷ್ಟು ಕೆಲಸ ಮಾಡಿದ್ದಾರೆ. ಇದೀಗ ಸಮಗ್ರ ಬೀದರ್ ಕ್ಷೇತ್ರದ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಸ್ವ ಗ್ರಾಮವಾದ ಭಾಲ್ಕಿ ತಾಲೂಕಿನ ಜನರು ಶೆ.100ಕ್ಕೆ ನೂರರಷ್ಟು ಬೆಂಬಲಿಸಬೇಕು ಎಂದರು.


ಸಾಗರ ಖಂಡ್ರೆ ನಂತರ ಸಿದ್ದೇಶ್ವರ ವಾಡಿ, ಕೋನ ಮೇಳಕುಂದಾ, ಕಣಜಿ, ಬ್ಯಾಲಹಳ್ಳಿ, ಹಾಲಹಳ್ಳಿ, ರುದನೂರ, ಗ್ರಾಮಗಳಲಿ ಪಾದ ಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಮೈತ್ರಿ ಪಕ್ಷದ ಅಭ್ಯರ್ಥಿ ಈಶ್ವರ ಬಿ ಖಂಡ್ರೆ ಅವರ ಪರವಾಗಿ ಮತ ಯಾಚನೆ ಮಾಡಿದರು. ಪ್ರರಮುರಖರದ ಪಪು ಪಟಿಲ ಇತರರು ಇದ್ದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ