ಔರಾದ್‍ನಲ್ಲಿ ಕೌಡ್ಯಾಳ ಬಿರುಸಿನ ಪ್ರಚಾರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಔರಾದ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯುವ ಮುಖಂಡ, ಕಳೆದ ವಿಧಾನಸಭಾ ಚುನಾವಣೆಯ ಔರಾದï ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ ನೇತೃತ್ವದಲ್ಲಿ ಬಿರುಸಿನ ಪ್ರಚಾರ ನಡೆದಿದೆ.

ಶುಕ್ರರುವಾರ ವಿವಿಧೆಡೆ ಪ್ರಚಾರ ನಡೆಸಿದ ವಿಜಯಕುಮಾರ ಕೌಡ್ಯಾಳ, ಜಿಲ್ಲೆಯಲ್ಲಿ ಈಶ್ವರ ಖಂಡ್ರೆ ಮಹಾ ಶಕ್ತಿ ಇದ್ದಂತೆ. ಅವರ ಸುನಾಮಿ ಎದರು ಈ ಬಾರಿ ಬಿಜೆಪಿ ಅಭ್ಯರ್ಥಿ ಧೂಳಿಪಟ ಆಗಲಿದ್ದರೆ ಎಂದರು.
ಕೇವಲ ಮೋದಿ ಗಾಳಿಗೆ ಖೂಬಾ ಮೆಚ್ಚಿಕೊಂಡಿದ್ದರೆ. ಆದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಅಜೆಂಡಾ ಹೊಂದಿರುವ ಈಶ್ವರ ಖಂಡ್ರೆ ಒಂದು ರೀತಿ ಸುನಾಮಿ ಇದ್ದಂತೆ. ಇವರ ಎದರು ಎಂಥ ಗಾಳಿ ಸಹ ಕೆಲಸ ಮಾಡಲ್ಲ ಎಂದು ಹೇಳಿದರು.


ಬಿಜೆಪಿಯವರ ಬಾಯಿಯಲ್ಲಿ ಕೇವಲ ಮೋದಿ ಎಂಬ ಎರಡು ಅಕ್ಷರಗಳು ಮಾತ್ರ ಬರುತ್ತವೆ. ಅದನ್ನು ಹೊರತುಪಡಿಸಿದರೆ ಇವರಿಗೆ ಅಭಿವೃದ್ಧಿ ಬಗ್ಗೆ ಗೊತ್ತಿಲ್ಲ. ಕೋಮುವಾದಿಗಳಿಗೆ ಯಾವುದೇ ಕಾರಣಕ್ಕಾಗಿ ಮತ ನೀಡಬೇಡಿ. ಎಲ್ಲರ ಹಿತ ಕಾಪಾಡುವ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.


ಔರಾದ್ ತಾಲೂಕಿನ ಎಲಡೆ ಕಾಂಗ್ರೆಸ್ ಪರ ವಾತಾವರಣ ಇದೆ. ಕಾಂಗ್ರೆಸ್‍ಗೆ ಅಧಿಕ ಲೀಡ್ ಸಿಗಲಿದೆ. ಈ ಚುನಾವಣೆ ಯಲ್ಲಿ ಈಶ್ವರ ಖಂಡ್ರೆ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದರೆ ಈ ಬಾರಿ ತೀವ್ರ ಮುಖಭಂಗಬಾಗಲಿದೆ ಎಂದು ಹೇಳಿದರು.
===============================

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ