ಭಾರತದಲ್ಲಿ ದಾಳಿ ನಡೆಸಲು ಅಲ್​ಖೈದಾ ಮತ್ತು ಐಸಿಸ್​ ಸಂಚು

ನವದೆಹಲಿ: ಭಾರತದಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಅಲ್​ಖೈದಾ ಮತ್ತು ಐಸಿಸ್​ ಭಯೋತ್ಪಾದನಾ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೆಹಲಿ, ಮುಂಬೈ, ಗೋವಾ ಮೂರೂ ಸ್ಥಳದಲ್ಲಿರುವ ಯೆಹೂದಿಗಳ ಧಾರ್ಮಿಕ ಕೇಂದ್ರಗಳು ಅಥವಾ ವಾಸಸ್ಥಳಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಬೇಹುಗಾರಿಕಾ ಸಂಸ್ಥೆಗಳು ಮಾಹಿತಿ ನೀಡಿವೆ.

ವಾಹನಗಳನ್ನು ನುಗ್ಗಿಸಿ ಇಲ್ಲವೇ ಚೂರಿಯನ್ನು ಬಳಸಿ ಈ ದಾಳಿಗಳನ್ನು ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಮುಂಬೈನಲ್ಲಿರುವ ಇಸ್ರೇಲ್​ ರಾಯಭಾರ ಕಚೇರಿ, ಧಾರ್ಮಿಕ ಕೇಂದ್ರಗಳು ಮತ್ತು ಚಾಬಾದ್​ ಹೌಸ್​ ಸಮುಚ್ಚಯದ ಸುತ್ತ ಹೆಚ್ಚಿನ ಭದ್ರತಾ ಏರ್ಪಾಡುಗಳನ್ನು ಮಾಡುವಂತೆ ಸಲಹೆ ನೀಡಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ