ಕಾಶಿ ವಿಶ್ವನಾಥ ದೇವಾಲಯಕ್ಕೆ ಪ್ರಿಯಾಂಕ ಗಾಂಧಿಗೆ ಪ್ರವೇಶ ನೀಡಬಾರದು ಎಂದು ಸರ್ಕಾರಕ್ಕೆ ವಕೀಲರ ಮನವಿ

ವಾರಾಣಸಿ: ವಿಶ್ವವಿಖ್ಯಾತ ಕಾಶಿ ವಿಶ್ವನಾಥ ದೇವಾಲಯಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ಪ್ರವೇಶ ನೀಡಬಾರದು ಎಂದು ವಕೀಲರ ಸಮೂಹವೊಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಕ್ರೈಸ್ತ ಮತೀಯರಾಗಿರುವ ಪ್ರಿಯಾಂಕ ಗಾಂಧಿ ವದ್ರ ಅವರನ್ನು ಕಾಶಿ ವಿಶ್ವನಾಥ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಬಾರದು ಎಂದು ವಕೀಲರ ಸಮೂಹ ಮನವಿ ಮಾಡಿದೆ.

ಸನಾತನ ಧರ್ಮ ಹಾಗೂ ಪರಂಪರೆಗೆ ಹೆಸರಾಗಿರುವ ಕಾಶಿ ದೇವಸ್ಥಾನಕ್ಕೆ ಪ್ರಿಯಾಂಕ ಅವರ ಭೇಟಿ ಸರಿಯಲ್ಲ ಎಂದು ವಕೀಲರು ಜಿಲ್ಲಾಧಿಕಾರಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಸೂಚಿಸಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

priyanka gandhi,kashi,vishwanath mandir

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ