ಗ್ರಾಮಕ್ಕೆ ನುಗ್ಗಿ ತೆಂಗಿನ ಮರವೇರಿದ ಚಿರತೆ

ಮಂಡ್ಯ, ಮಾ.7- ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಚಿರತೆಯೊಂದು 35 ಅಡಿ ಎತ್ತರದ ತೆಂಗಿನ ಮರವೇರಿ ಕುಳಿತ ಘಟನೆ ಕೆಆರ್ ಪೇಟೆ ತಾಲೂಕಿನ ಸೋಮನಾಥಪುರದಲ್ಲಿ ನಡೆದಿದೆ.

ಯೋಗೇಶ್ ಎಂಬುವವರ ಜಮೀನಿನಲ್ಲಿ ಪತ್ತೆಯಾಗಿದ್ದ ಚಿರತೆಯನ್ನು ಕಂಡ ಸಾರ್ವಜನಿಕರು ಅದನ್ನು ಓಡಿಸಲು ಮುಂದಾದಾಗ ಅದು ತೆಂಗಿನ ಮರವೇರಿದೆ.

ತಕ್ಷಣ ಅರಣ್ಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದರು. ಅವರು ಬರುವವರೆಗೂ ವನ್ಯಪ್ರಾಣಿ ಕೆಳಗಿಳಿಯಲಿಲ್ಲ. ನಂತರ ಅದನ್ನು ಕೆಳಗಿಳಿಸಲು ಸಂಜೆಯವರೆಗೂ ಪ್ರಯಾಸ ಪಡಲಾಯಿತು.

ಈ ದೃಶ್ಯ ನೋಡಲು ಅಕ್ಕಪಕ್ಕದ ಗ್ರಾಮದ ನೂರಾರು ಮಂದಿ ಜಮಾಯಿಸಿದ್ದರು.ಇದರಿಂದ ಗಾಬರಿಗೊಂಡ ಚಿರತೆ ಸುತರಾಂ ಕೆಳಗಿಳಿಯದೆ ಸತಾಯಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ