ಭಾರತಕ್ಕೆ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಹಸ್ತಾಂತರಿಸಿದ ಪಾಕ್

ವಾಘಾ: ಭಾರತಕ್ಕೆ ಮರಳಿದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಅವರಿಗೆ ಭಾರತದ ಗಡಿಯಲ್ಲಿ ಭವ್ಯ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು.

ಭಾರತದ ಅಟಾರಿ ಪ್ರದೇಶದ ವಾಘ ಗಡಿಯಲ್ಲಿ ಭಾರತದ ವೀರಪುತ್ರ ಅಭಿನಂದನ್ ಅವರನ್ನು ಪಾಕಿಸ್ತಾನ ಅಧಿಕಾರಿಗಳು, ಭಾರತದ ಏರ್ ಫೋರ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಪಾಕ್ ಅಧಿಕಾರಿಗಳು ಅಭಿನಂದನ್ ಅವರ ಹಸ್ತಾಂತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಿದ್ದಂತೆಯೇ ಅಟಾರಿ ಗಡಿಯಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ತಾಯ್ನಾಡಿಗೆ ಮರಳಿದ ವೀರ ಪುತ್ರನನ್ನು ಬರಮಾಡಿಕೊಳ್ಳಲು ಇಡೀದೇಶದ ಮೂಲೇ ಮೂಲೆಗಳಿಂದಲೇ ಜನಸಾಗರ ಹರಿದು ಬಂದಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ