ವಿಂಗ್ ಕಮಾಂಡರ್ ಅಭಿನಂದನ್ ದೇಶದ ಹೆಮ್ಮೆ : ಪ್ರಧಾನಿ ಮೋದಿ

ಕನ್ಯಾಕುಮಾರಿ: ವಿಂಗ್ ಕಮಾಂಡರ್ ಅಭಿನಂದನ್ ದೇಶದ ಹೆಮ್ಮೆ, ಅವರ ಆಗಮನಕ್ಕಾಗಿ ಇಡೀ ದೇಶವೇ ಕಾತರದಿಮ್ದ ಕಾಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಕನ್ಯಾಕುಮಾರಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಾಕಿಸ್ತಾನದಿಂದ ಬಂಧಮುಕ್ತಗೊಳ್ಳುತ್ತಿರುವ ವಿಂಗ್ ಕಮಾಂಡರ್​ ಅಭಿನಂದನ್ ಈ ರಾಷ್ಟ್ರದ ಹೆಮ್ಮೆಯ ಪುತ್ರ. ದೇಶದ ಪ್ರತಿಯೊಬ್ಬರೂ ಅವರ ಆಗಮನಕ್ಕೆ ಕಾದಿದ್ದಾರೆ. ಪಾಕ್ ಯುದ್ಧ ವಿಮಾನವನ್ನು ಹೊಡೆದುರಿಳಿಸಿರುವ ಅವರ ಕಾರ್ಯ ಶ್ಲಾಘನೀಯ ಎಂದರು.

ಭಯೋತ್ಪಾದನೆ ನಿರ್ಮೂಲನೆ ವಿಚಾರದಲ್ಲಿ ಎಲ್ಲ ರಾಷ್ಟ್ರಗಳು ಭಾರತದೊಂದಿಗೆ ನಿಂತಿವೆ. ಭಯೋತ್ಪಾದನೆಯ ವಿಚಾರದಲ್ಲಿ ನಾವು ಎಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಗುಡುಗಿದ್ದಾರೆ.

Every Indian Is Proud Of Brave IAF Pilot Abhinandan Varthaman: Prime Minister Narendra Modi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ