ಲಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ-ಅಪಘಾತದಲ್ಲಿ ನವ ವಿವಾಹಿತೆಯ ಸಾವು

ಮಂಡ್ಯ, ಫೆ.23-ಓವರ್‍ಟೆಕ್ ಮಾಡುವ ಬರದಲ್ಲಿ ಟೈಲ್ಸ್ ತುಂಬಿದ್ದ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತೆ ಸ್ಥಳದಲ್ಲಿ ಸಾವನ್ನಪ್ಪಿದರೆ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಯಲಿಯೂರು ಸಮೀಪ ತಡರಾತ್ರಿ ನಡೆದಿದೆ.

ಸಹನ (19) ಮೃತಪಟ್ಟ ಯುವತಿ ದರ್ಶನ(24) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮನಗರದ ಗಾಂಧಿ ನಗರದ ಸಹನ ಹಾಗೂ ತಾಲೂಕಿನ ಬನ್ನಿ ಕುಪ್ಪೆಯದರ್ಶನ್ ಇಬ್ಬರು ಪ್ರೀತಿಸುತ್ತಿದ್ದು ನಾಲ್ಕು ದಿನಗಳ ಹಿಂದೆಷ್ಟೇ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ. ನವದಂಪತಿಗಳು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಯಲಿಯೂರು ಸಮೀಪ ಟೈಲ್ಸ್ ಲಾರಿಯನ್ನು ಓವರ್‍ಟೆಕ್ ಮಾಡಲು ಹೋದಾಗ ನಿಯಂತ್ರಣ ತಪ್ಪಿ ಲಾರಿಗೆಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಪರಿಣಾಮ ಸಹನ ಮೇಲೆ ಸಾರಿಗೆ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದರ್ಶನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ

ಕಳೆದ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದು, ನಾಲ್ಕು ದಿನಗಳ ಹಿಂದೆ ಮದುವೆಯಾಗಿ ರುವುದಾಗಿ ರಾಮನಗರ ಮಹಿಳಾ ಪೋಲೀಸ್‍ ಠಾಣೆಗೆ ಹಾಜರಾಗಿ ತಿಳಿಸಿದ್ದರು

ಈ ಸಂಬಂಧ ಮಂಡ್ಯ ಗ್ರಾಮಾಂತರ ಪೋಲೀಸ್ ಠಾಣಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ