ಸಹೋದರರನ್ನು ಕೊಚ್ಚಿ ಹತ್ಯೆ ಮಾಡಿದ ದುಷ್ಕರ್ಮಿಗಳು

ವಿಜಯಪುರ, ಫೆ.23- ಸಹೋದರರನ್ನು ಮಾರಕಾಸ್ತ್ರಗಳಿಂದ ಕತ್ತು ಕುಯ್ದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವಘಟನೆ ನಗರದಗಾಂಧಿ ಚೌಕ ಹಾಗೂ ಗೋಲಗುಮ್ಮಟ ಪೋಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಲೀಂ ಕುಚಬಲ್(33) ಹಾಗೂ ರಝಾಕ್ ಕುಚಬಲ್(28) ಕೊಲೆಯಾಗಿರುವ ಅಣ್ಣ-ತಮ್ಮಂದಿರು

ನಿನ್ನೆ ತಡರಾತ್ರಿ ನಗರದ ಜಯ ಕರ್ನಾಟಕ ಕಾಲನಿಯಲ್ಲಿ ಸಲೀಂ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದರೆ, ತಮ್ಮ ರಝಾಕ್ ಅವರನ್ನು ಗಾಂಧಿ ವೃತ್ತದ ಸರಕಾರಿಕಾಲೇಜು ಬಳಿಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ

ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈಕೃತ್ಯ ನಡೆಸಿದ್ದಾರೆ ಎಂದು ಶಂಕಿಸಲಾಗಿದ್ದು, ಮೃತ ಸಹೋದರರು ಕೂಲಿ ಕಾರ್ಮಿಕರಾಗಿದ್ದರು ಎಂದರು ತಿಳಿದುಬಂದಿದೆ

ವಿಜಯಪುರ ನಗರದಗಾಂಧಿ ಚೌಕ ಪೋಲೀಸ್‍ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ