ದಹೆಲಿ ಕ್ರಿಕೆಟ್ ಅಸೋಸಿಯೇಶನ್‍ ಸದಸ್ಯನ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

ದೆಹಲಿ: ದಹೆಲಿ ಕ್ರಿಕೆಟ್ ಅಸೋಸಿಯೇಶನ್‍ನ ಆಯ್ಕೆ ಮಂಡಳಿಯ ಸಮಿತಿಯ ಸದಸ್ಯ ಅಮಿತ್ ಭಂಡಾರಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಗೆ ಸಿದ್ಧತೆ ನಡೆಸಬೇಕಾದ ಕಾರಣ ಹಿರಿಯರ ತಂಡಕ್ಕೆ ಅಭ್ಯಾಸ ಪಂದ್ಯ ಏರ್ಪಡಿಸಲಾಗಿತ್ತು. ತಮ್ಮನ್ನ ತಂಡಕಕೆ ಆಯ್ಕೆ ಮಾಡಿಲ್ಲ ಅನ್ನೊ ಕಾರಣಕ್ಕೆ ಅಂಡರ್ 23 ಆಟಗಾರ ಅನುಜ್ ದೆಹ್ದಾ ಅಮಿತ್ ಭಂಡಾರಿ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆಗೊಳಗಾದ ಅಮಿತ್ ಭಂಡಾರಿಯನ್ನ ತಕ್ಷಣ ಸಹೋದ್ಯೋಗಿಗಳ ನೆರವಿನಿಂದ ಸ್ಥಳೀಯ ಆಸ್ಪತ್ರೆ ಸಿವಿಲ್ ಲೈನ್ಸ್ ಆಸ್ಪತ್ರಗೆ ಕರೆದುಕೊಂಡು ಹೋಗಲಾಗಿದೆ.

ಅಮಿತ್ ಭಂಢಾರಿ ಮೇಲಿನ ಹಲ್ಲೆಯನ್ನ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಖಂಡಿಸಿದ್ದಾರೆ. ಟೀಂ ಇಂಡಿಯಾದ ಮಾಜಿ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭಿರ್ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಟೀಂ ಇಂಡಿಯಾದ ಡೆಲ್ಲಿ ಡ್ಯಾಶರ್ ಶಿಖರ್ ಧವನ್ ಈ ಘಟನೆ ಬೇಸರ ಮತ್ತು ಶಾಕ್‍ಎರಡು ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ