ಸರ್ಕಾರದಿಂದ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ 200 ಕೋಟಿ ರೂ. ಅನುದಾನ: ಕ್ರೈಸ್ತ ಸಂಘದಿಂದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಕೆ

ಬೆಂಗಳೂರು, ಫೆ.9-ರಾಜ್ಯ ಅಲ್ಪಸಂಖ್ಯಾತರ ಕ್ರೈಸ್ತ ಘಟಕ ರಾಜ್ಯ ಬಜೆಟ್‍ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಘೋಷಿಸಿ 200 ಕೋಟಿ ರೂ.ಅನುದಾನ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಅಭಿನಂದನೆ ಸಲ್ಲಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಘಟಕದ ರಾಜ್ಯಾಧ್ಯಕ್ಷ ವಿಲ್ಸನ್‍ರೆಡ್ಡಿ, ನಿಗಮ ಸ್ಥಾಪನೆ ಮತ್ತು ಅನುದಾನ ಕ್ರೈಸ್ತರ ಬಹುದಿನದ ಬೇಡಿಕೆಯಾಗಿದ್ದು ಮುಖ್ಯಮಂತ್ರಿಯವರು ಬಜೆಟ್‍ನಲ್ಲಿ ಘೋಷಿಸಿರುವುದನ್ನು ಅಭಿನಂದಿಸಿ ವಂದನೆ ಸಲ್ಲಿಸಿದರು.

ಇದೇ ವೇಳೆ ಘಟಕದ ಪದಾಧಿಕಾರಿಗಳು ಮಾತನಾಡಿ, ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ವಿಲ್ಸನ್ ರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಘಟಕದ ಪದಾಧಿಕಾರಿಗಳಾದ ಡೇವಿಡ್ ಆರ್.ಜೇಮ್ಸï ವೈ.ಎ.ಚಾಲ್ರ್ಸ್ ಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ