ಕರ್ತವ್ಯಲೋಪದಡಿ ಪಿಎಸ್ಐ ಅಮಾನತು

ಚಿಕ್ಕಮಗಳೂರು, ಜ.9-ಕರ್ತವ್ಯಲೋಪದ ಆರೋಪದಡಿ ಚಿಕ್ಕಮಗಳೂರು ನಗರ ಠಾಣೆ ಪಿಎಸ್‍ಐ ಕೆ.ಆರ್.ರಘು ಅಮಾನತುಗೊಂಡಿದ್ದಾರೆ.

ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಜನವರಿ 7 ರಂದು ನಗರ ಠಾಣೆಗೆ ದಿಢೀರ್ ಭೇಟಿ ನೀಡಿ ಠಾಣೆಯಲ್ಲಿ ಕರ್ತವ್ಯ ಪರಿಶೀಲನೆ ನಡೆಸುವ ವೇಳೆ ಪ್ರಕರಣಗಳ ಅಸಮರ್ಪಕ ತನಿಖೆಯಾಗಿರುವ ವಿಚಾರ  ತಿಳಿದುಬಂದಿದ್ದು, ನಗರ ಬೀಟ್ ನಿರ್ವಹಣೆಯಲ್ಲಿ ಬೇಜವಾಬ್ದಾರಿ ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ