ಮಣ್ಣು ಕುಸಿದು ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಮೈಸೂರು,ಜ.9- ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು   ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.

ಕಾರ್ಮಿಕರಾದ ಕೆ.ಆರ್.ಪೇಟೆಯ ಚಂದನ್ (27), ಉದ್ದಗೂರಿನ ಪುಟ್ಟರಾಜು(25) ಹಾಗೂ ವಾಜಮಂಗಲದ ಮರಿಸ್ವಾಮಿ(50) ಎಂಬುವರನ್ನು ರಕ್ಷಿಸಿ ನಗರದ ಅಫೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರು ತಾಲ್ಲೂಕಿನ ದಾಸನಕೊಪ್ಪಲು ಗ್ರಾಮದಲ್ಲಿ ಒಳಚರಂಡಿ ಕೊಳವೆ ಕಾಮಗಾರಿ  ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜೆಸಿಬಿ ಯಂತ್ರದ ಮೂಲಕ ಆಳವಾದ ಗುಂಡಿ ತೆಗೆಯಲಾಗಿತ್ತು.

ಗುಂಡಿಗೆ ಇಳಿದಿದ್ದ ಮೂವರು ಕಾರ್ಮಿಕರು ಕೊಳವೆಗಳನ್ನು ಅಳವಡಿಸುತ್ತಿದ್ದಾಗ ಇವರ ಮೇಲೆ ಮಣ್ಣು ಕುಸಿದು ಮಣ್ಣನಡಿ ಸಿಲುಕೊಂಡಿದ್ದರು.

ತಕ್ಷಣ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಇವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಜೀವರಕ್ಷಕ ಸಾಧನಗಳನ್ನು ನೀಡಿ ನಂತರ ಮಣ್ಣನ್ನು ಹೊರತೆಗೆದು ಅವರನ್ನು ರಕ್ಷಿಸಲಾಯಿತು.

ಕಾಮಗಾರಿಗೆ ಮುಂಜಾಗ್ರತಾ ಕ್ರಮ ವಹಿಸದ ಗುತ್ತಿಗೆದಾರರ ಮಹೇಂದ್ರನ ವಿರುದ್ದ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ