ನಗರಕ್ಕೆ ನೀಡಿರುವ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ ಮಾಡಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು: ಸಮಾಜ‌ಕಲ್ಯಾಣ‌ ಇಲಾಖೆಯಿಂದ‌ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಬಿಬಿಎಂಪಿಗೆ ನೀಡಿರುವ ಅನುದಾನವನ್ನು ನಗರದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮನೆ ನಿರ್ಮಾಣ, ರಸ್ತೆ,ನೀರು, ಶಿಕ್ಷಣಕ್ಕೆ ಬಳಕೆ‌ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದರು.

ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಸ್‌ಸಿಪಿ‌-ಟಿಎಸ್‌ಪಿ ಅಡಿಯಲ್ಲಿ ಎಸ್‌ಸಿ ಎಸ್‌ಟಿ ಅವರಿಗಾಗಿ ಪ್ರತಿ ಇಲಾಖೆಗೂ ಅನುದಾನ ನೀಡಲಾಗುತ್ತಿದೆ.‌

ಈ ಹಣವನ್ನು ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣದಂಥ ಬೇರೆ ಕೆಲಸಕ್ಕೆ ಬಳಕೆ‌ ಮಾಡಿಕೊಳ್ಳಬೇಡಿ. ಎಸ್‌ಸಿ, ಎಸ್‌ಟಿ ಅವರು ವಾಸವಿರುವ ಕಾಲೋನಿಗಳನ್ನು‌ ಗುರುತಿಸಿ, ಆ ಭಾಗದಲ್ಲಿ ಅವರಿಗೆ ನಿವಾಸ, ಕುಡಿಯುವ ನೀರು, ಶಿಕ್ಷಣ ಇತರೆ ಮೂಲಸೌಕರ್ಯ‌ ಒದಗಿಸುವ ನಿಟ್ಟಿನಲ್ಲಿ ಹಣ ಬಳಕೆ ಮಾಡಿಕೊಳ್ಳಿ ಎಂದರು.

Deputy Chief Minister and Bengaluru Development Minister Dr G Parameshwara on held a meeting officials

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ