ಗಾಯನ ಸಮಾಜದಲ್ಲಿ ನಾಳೆ ಡಾ.ಸಿ.ಅಶ್ವಥ್ ಸ್ಮರಣೆ ಹಿನ್ನಲೆ ವಿಶೇಷ ಕಾರ್ಯಕ್ರಮ

ಬೆಂಗಳೂರು, ಡಿ.28-ಮೀಟಿಂಗ್ ಮೈಂಡ್ಸ್ ಇನ್ಫೋಸಿಸ್ಟೆಮ್ಸ್ ನೇತೃತ್ವದಲ್ಲಿ ಸುಗಮ ಸಂಗೀತ ಗಾಯಕರಾದ ಪ್ರವೀಣ್-ಪ್ರದೀಪ್ ಸಾರಥ್ಯದಲ್ಲಿ ನಾಳೆ ಸಂಜೆ 6 ಗಂಟೆಗೆ ನಗರದ ಗಾಯನ ಸಮಾಜದಲ್ಲಿ ಡಾ.ಸಿ.ಅಶ್ವಥ್ ಸ್ಮರಣೆಯಲ್ಲಿ ಅವತರಿಸು ಬಾ ನೆನಪಿನಂಗಳದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಗೀತ ನಿರ್ದೇಶಕ ಖ್ಯಾತ ಹಿನ್ನೆಲೆ ಗಾಯಕ ದಿವಂಗತ ಡಾ.ಸಿ.ಅಶ್ವಥ್ ಅವರು ಸಂಯೋಜಿಸಿದ ಗೀತೆಗಳ ಮೂಲಕ ಅವರನ್ನು ನೆನೆಯುವ ಈ ಕಾರ್ಯಕ್ರಮದಲ್ಲಿ ಅಶ್ವಥ್ ಅವರ ಸ್ವರಸಂಯೋಜನೆಯ ಗೀತೆಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.

ಚಂದ್ರಾ ಸಿ.ಅಶ್ವಥ್, ಶಾಸಕ ರವಿ ಸುಬ್ರಹ್ಮಣ್ಯ, ಹಿರಿಯ ರಂಗಕರ್ಮಿಗಳಾದ ಬಿ.ವಿ.ರಾಜಾರಾಂ, ಶ್ರೀನಿವಾಸ್ ಜಿ.ಕಪ್ಪಣ್ಣ, ಸಂಗೀತ ನಿರ್ದೇಶಕ ಎಸ್.ಬಾಲಿ, ಲಹರಿ ವೇಲು, ಚಲನಚಿತ್ರ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಟಿ.ಎನ್.ಸೀತಾರಾಮ್, ಕರ್ನಾಟಕ ಸುಗಮ ಸಂಗೀತ ಪರಿಷತ್ ಗೌರವಾಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಗಾಯಕರಾದ ಮಂಗಳಾರವಿ, ಸುನೀತಾ ಎಸ್.ಮುರಳಿ, ವಕೀಲ ವೈ.ಜಗದೀಶ್ ಮತ್ತಿತರರು ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ