ಬಿಎಂಟಿಸಿ ಬಸ್ಸಿನಿಂದ ಬೈಕಿಗೆ ಡಿಕ್ಕಿ, ಬೈಕ್‍ ಸವಾರ ಸ್ಥಳದಲ್ಲೇಸಾವು

ಬೆಂಗಳೂರು, ಡಿ.19- ಬಿಎಂಟಿಸಿ ಬಸ್‍ಗೆ ಸಿಕ್ಕಿ ನಿನ್ನೆಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ಇಂದು ಮತ್ತೊಂದು ಇಂತಹದ್ದೇ ಘಟನೆಯಿಂದ ಖಾಸಗಿ ಕಂಪೆನಿ ನೌಕರ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಮೃತ ನೌಕರನನ್ನುಕಲ್ಯಾಣನಗರದ ನೊಮಾನ್ ನೌಷಾದ್ (24) ಎಂದುಗುರುತಿಸಲಾಗಿದೆ.

ಎಂದಿನಂತೆ ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ನೊಮಾನ್‍ ತನ್ನ ಬೈಕ್‍ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.

ಕೆಆರ್ ಪುರಂ ಬಳಿಯ ನಾರಾಯಣಪುರದ ಮೂಲಕ ಅತಿ ವೇಗವಾಗಿ ಮುನ್ನುಗ್ಗಿದ ಬಿಎಂಟಿಸಿ ಬಸ್ ಬೈಕ್‍ಗೆಡಿಕ್ಕಿ ಹೊಡೆದ ಪರಿಣಾಮ ನೊಮಾನ್ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಕೆಆರ್ ಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಮೃತದೇಹವನ್ನುಆಸ್ಪತ್ರೆಗೆ ಹಸ್ತಾಂತರಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ನಿನ್ನೆ ಫುಟ್ಪಾತ್ ಮೇಲೆ ನಡೆದುಕೊಂಡು ಕಾಲೇಜಿಗೆ ತೆರಳುತ್ತಿದ್ದ ಯದುಕುಮಾರ್ ಮತ್ತುಚಂದ್ರಕಾಂತ್ ಎಂಬ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತ ಪಟ್ಟಘಟನೆ ಮಾಸುವ ಮುನ್ನವೇ ಇಂದು ಬೆಳಗ್ಗೆ ಕಿಲ್ಲರ್ ಬಿಎಂಟಿಸಿ ಬಸ್‍ಗೆ ನೌಕರ ಬಲಿಯಾಗಿರುವುದು ದುರದೃಷ್ಟಕರ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ