57 ಕೆಜಿ ಚಿನ್ನದ ಗಟ್ಟಿ ಕಿಕ್​ಬ್ಯಾಕ್​ ಪಡೆದ ಪ್ರಕರಣ; ರೆಡ್ಡಿಗೆ ಇಂದು ಸಿಗುತ್ತಾ ಜಾಮೀನು?

ಬೆಂಗಳೂರು:  57 ಕೆ.ಜಿ. ಚಿನ್ನದ ಗಟ್ಟಿ ಕಿಕ್​ಬ್ಯಾಕ್​ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಪರ ವಕೀಲರು ಇಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.

ದೀಪಾವಳಿ ಹಬ್ಬದ ನಿಮಿತ್ತ ಗುರುವಾರ ನ್ಯಾಯಾಲಯಕ್ಕೆ ರಜೆ ಇತ್ತು. ಹಾಗಾಗಿ ಇಂದು ನಿರೀಕ್ಷಣಾ ಜಾಮೀನು ಕೋರಿ ಅವರ ಪರ ವಕೀಲರು ಸೆಷನ್ ಕೋರ್ಟ್​ ಮೆಟ್ಟಿಲೇರಲಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಅರ್ಜಿ ಸಲ್ಲಿಕೆಯಾದರೆ, ಮಧ್ಯಾಹ್ನ 3 ಗಂಟೆ ವೇಳೆಗೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಸದ್ಯ ರೆಡ್ಡಿಗಾಗಿ ಎಲ್ಲಕಡೆ ಹುಡುಕಾಟ ನಡೆಸಲಾಗುತ್ತಿದೆ.

ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಇಂದು ಅಲಿಖಾನ್ ವಿಚಾರಣೆ ನಡೆಯಲಿದೆ. ಸಂಜೆ ಒಳಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ. ಆದರೆ, ಅಲಿಖಾನ್ ಮುಂಬಯಿನಲ್ಲಿರುವ ಶಂಕೆ ಇದೆ. ಹೀಗಾಗಿ ಅವರು, ನ್ಯಾಯಾಲಯಕ್ಕೆ ಹಾಜರಾಗುತ್ತಾರಾ ಅಥವಾ ಇಲ್ಲವಾ ಎನ್ನುವ ಕುತೂಹಲ ಮೂಡಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ