ಮಾತುಕತೆಗೆ ಕರೆದು ನಮ್ಮವರನ್ನು ಕೊಂದರು; ಇಮ್ರಾನ್ ಕಪಟಿ ಎಂದ ಸುಷ್ಮಾ..!

ವಾಷಿಂಗ್ಟನ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಕಟುವಾಗಿ ಟೀಕಿಸಿರುವ ಭಾರತ ಪಾಕಿಸ್ತಾನ ಭಯೋತ್ಪಾದನೆಯ ಪ್ರಾಯೋಜಕತ್ವ ಮಾಡುತ್ತಿದೆ ಎಂದಿದೆ.

ಭಾರತದ ಪರವಾಗಿ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, 9/11 ಹಾಗೂ 26/11ರ ಭಯೋತ್ಪಾದನಾ ದಾಳಿಗಳು ಈ ಶತಮಾನದ ಶಾಂತಿಗೆ ಭಂಗ ತಂದಿದೆ. ಮುಂಬೈ ದಾಳಿಯ ಮುಖ್ಯ ರೂವಾರಿ ಹಫೀಜ್ ಸಯೀದ್ ಪಾಕಿಸ್ತಾನದ ಬೀದಿಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಪಾಕಿಸ್ತಾನ ಮಾತುಕತೆಗೆ ಪತ್ರ ಬರೆದ ಬೆನ್ನಲ್ಲೇ ನಮ್ಮ ಸೈನಿಕರನ್ನು ಹತ್ಯೆ ಮಾಡಿದೆ. ಈ ಮೂಲಕ ಇಮ್ರಾನ್ ಖಾನ್ ತನ್ನ ಕಪಟ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಗರಂ ಆಗಿ ಹೇಳಿದ್ದಾರೆ.
ಶಾಂತಿ ಮಾತುಕತೆ ನಮ್ಮಿಂದ ಮುರಿದು ಬಿದ್ದಿಲ್ಲ. ಆ ರೀತಿಯ ಹೇಳಿಕೆಗಳು ಶುದ್ಧ ಸುಳ್ಳು. ಮಾತುಕತೆ ಮುರಿದು ಬೀಳಲು ಆ ರಾಷ್ಟ್ರದ ನಡತೆಯೇ ಕಾರಣ ಎಂದು ಸುಷ್ಮಾ ಸ್ವರಾಜ್ ಖಡಕ್ ಆಗಿ ಉತ್ತರಿಸಿದ್ದಾರೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ