ತುಮಕೂರಿನಲ್ಲಿ ಕಾರ್ಪೋರೇಟರ್ ನ ಬರ್ಬರ ಹತ್ಯೆ?

ತುಮಕೂರು: ಜಿಲ್ಲೆಯ ಬಟವಾಡಿ ಬಳಿ ಅಪಘಾತವಾದ ರೀತಿಯಲ್ಲಿ ಕಾರ್ಪೋರೇಟರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ರವಿಕುಮಾರ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕಾರ್ಪೋರೇಟರ್. ಈ ಬಾರಿ ಕಾರ್ಪೋರೇಷನ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರವಿಕುಮಾರ್ ನನ್ನು ಬಟವಾಡಿ ಬಳಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಅಪಘಾತವಾದ ರೀತಿಯಲ್ಲಿ ಕೊಚ್ಚಿ ಕೊಂದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ರವಿಕುಮಾರ್ ಅವರ ತಲೆ ಭಾಗಕ್ಕೆ ಬಲವಾದ ಪೆಟ್ಟುಬಿದ್ದಿದೆ. ಈ ಹಿಂದೆ ರವಿಕುಮಾರ್ ರೌಡಿಶೀಟರ್ ಆಗಿದ್ದರು. ಇದೇ ಈ ಹತ್ಯೆಗೆ ಕಾರಣನಾ ಎನ್ನುವಂತಹ ವಿಚಾರಗಳು ಇದೀಗ ಕೇಳಿಬರುತ್ತಿವೆ.
ಬಟವಾಡಿಯಲ್ಲಿರುವ ಫ್ಲೈಓವರ್ ನ ಕೆಳಗಡೆ ರವಿಕುಮಾರ್ ಶವ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದು ಕೊಲೆ ಎಂದು ಹೇಳಲಾಗಿದೆ. ಅಪಘಾತವಾದರೆ ಬದಿಯಲ್ಲಿ ಬೀಳಲು ಸಾಧ್ಯವಿಲ್ಲ. ರವಿಕುಮಾರ್ ರೌಡಿಶೀಟರ್ ಆಗಿದ್ದರಿಂದ ಅವರ ಮೇಲೆ ಅನೇಕರು ಕಣ್ಣಿಟ್ಟಿದ್ದರು. ಅಷ್ಟೇ ಅಲ್ಲದೇ ಅವರ ಮೇಲೆ 3-4 ಬಾರಿ ಹಲ್ಲೆ ಪ್ರಯತ್ನಗಳು ಕೂಡ ನಡೆದ್ದಿದ್ದವು. ಹೀಗಾಗಿ ಇದು ಕೊಲೆ ಎಂದು ಹೇಳಲಾಗುತ್ತಿದೆ.
ಬಟವಾಡಿ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 6 ತಿಂಗಳಿಂದ ಜೆಡಿಎಸ್ನಿಂದ ಸ್ಪರ್ಧಿಸಿ ಮೇಯರ್ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿ ಹೆಸರು ಗಳಿಸಿದ್ದರು. ಆದರೆ ರೌಡಿಸಂ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ರವಿಕುಮಾರ್ ಅವರ ವಿರುದ್ಧದ ಗ್ಯಾಂಗ್ ಈ ಕೃತ್ಯ ಎಸಗಿರಬಹುದು ಎಂಬ ಅನುಮಾನಗಳು ಇವೆ.
ಈ ಘಟನೆಗೆ ಸಂಬಂಧಪಟ್ಟಂತೆ ಬಟವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ